ಮುಂಡಗೋಡ : ಮಳೆಯಿಂದಾಗಿ ಆಂಜನೇಯ ದೇವಸ್ಥಾನದ ಹಿಂಬಾಗದಲ್ಲಿರುವ ಕೆರೆಯಲ್ಲಿ ನೀರು ತುಂಬಿಕೊಂಡಿರುವುದರಿಂದ ಮರಕ್ಕೆ ಗೂಡುಕಟ್ಟಿಕೊಂಡು ಆಶ್ರಯ ಪಡೆದ ಗುಬ್ಬಚ್ಚಿಗಳಿಗೆ ಅಪಾಯ ಒದಗಿಬಂದಿದೆ.
ಶತ್ರುಗಳಿಂದ ರಕ್ಷಿಸಿಕೊಳ್ಳಲು ಗುಬ್ಬಿಗಳು ಹೊಂಡದ ಅಂಚಿನಲ್ಲಿರುವ ಪುಟ್ಟ ಮರಕ್ಕೆ ೩೦-೩೨ ಗುಡೂಗಳನ್ನು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದವು. ಇದನ್ನು ನೋಡುವುದೇ ಒಂದು ಭಾಗ್ಯ ಎನ್ನುವಂತಿತ್ತು. ಆದರೆ ಇತ್ತಿಚೆಗೆ ಸುರಿದ ಮಳೆಯಿಂದಾಗಿ ಕೆರೆಯ ತೀರದ ಮರದ ಅಂಚಿನಲ್ಲಿ ಹಕ್ಕಿಗಳು ಕಟ್ಟಿರುವ ಗೂಡು ನೀರುಪಾಲಾಗಿದ್ದು ಹಕ್ಕಿಗಳ ಆಶ್ರಯಕ್ಕೆ ಅಪಾಯವನ್ನುಂಟು ಮಾಡಿದೆ.
ಮರಳಿ ಯತ್ನವ ಮಾಡು ಎನ್ನುವಂತೆ ತಮ್ಮ ಆಶ್ರಯ ತಾಣವಾಗಿರುವ ಆ ಗೂಡುಗಳು ಕೆರೆಯ ನೀರಲ್ಲಿ ಮುಳುಗಿದ್ದರೂ ಮನುಷ್ಯರಂತೆ ಕೈಕಟ್ಟಿ ಕುಳಿತುಕೊಳ್ಳದೆ ಮತ್ತದೆ ಮರಕ್ಕೆ ಗೂಡುಗಳನ್ನು ನಿರ್ಮಿಸಿವುದರ ಮೂಲಕ ತಮ್ಮ ಧೈರ್ಯವನ್ನು ಪ್ರದರ್ಶಿಸಿವೆ. ಇದನ್ನು ಕಂಡು ಮಾನವ ಬಹಳಷ್ಟು ಕಲಿಯಬೇಕಾಗಿದೆ. ಕೇವಲ ದೇವರ ಮೇಲೆ ಭಾರ ಹಾಕಿ ಕುಳಿತರೆ ಸಾಲದು ನಮ್ಮ ಅಂತಿಮ ಉಸಿರಿರುವರೆಗೂ ಪ್ರಯತ್ನ ಮಾಡಬೇಕಾಗಿದೆ ಎನ್ನುವ ಪಾಠ ಈ ಗುಬ್ಬಚ್ಚಿ ಗೂಡು ಮನುಷ್ಯರಿಗೆ ಕಲಿಸಿಕೊಡುತ್ತದೆ.
ಕೆರೆಯ ನೀರಲ್ಲಿ ಮುಳುಗಿ ಹೋಗಿರುವ ಗೂಡಗಳ ಬಗ್ಗೆ ತಲೆಬಿಸಿ ಮಾಡಿಕೊಳ್ಳದೇ ಆ ಮರದಲ್ಲಿಯೇ ಗೂಡನ್ನು ಕಟ್ಟಿ ವಾಸಮಾಡಲು ತಯಾರು ನಡೆಸಿವೆ. ಮನುಷ್ಯರು ತಮಗೆ ತೊಂದರೆ ಬಂದಾಗ ದೇವರ ಮೇಲೆ ಕೋಪಗೊಳ್ಳುತ್ತಾರೆ ಆದರೆ ಹಕ್ಕಿಗಳು ದೇವರು ಕೊಟ್ಟಯಾವುದೇ ಕಷ್ಟಕ್ಕೂ ಒಗ್ಗಿಕೊಳ್ಳುತ್ತವೆ ಎಂಬುದುಕ್ಕೆ ಗುಬ್ಬಚ್ಚಿಗಳೇ ಸಾಕ್ಷೀ.