ಮುಂಡಗೋಡ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಹಾಗೂ ಬೇಜವಾಬ್ದಾರಿ ತೋರುತ್ತಿರುವ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಯವರಿಗೆ ತಹಶೀಲ್ದಾರ ಮುಖಾಂತರ ಶುಕ್ರವಾರ ಮನವಿ ಅರ್ಪಿಸಿತು.
ಉತ್ತರಕನ್ನಡ ಜಿಲ್ಲೆ ಹಾಗೂ ತಾಲೂಕ ಮಟ್ಟದ ಇಲಾಖಾ ಅಧಿಕಾರಿಗಳು ಕಾನೂನಿನ ಅಡಿಯಲ್ಲಿ ಎಸ್ಸಿ/ಎಸ್ಟಿ ಜರಿಗೆ, ಅಲ್ಪಸಂಖ್ಯಾತರಿಗೆ, ಹಿಂದೂಳಿದ ವರ್ಗದ ಬಡ ಜನರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದ ಕಾನೂನುಗಲನ್ನು ಜಾರಿಗೆ ತರದೆ ಇಂಪ್ಲಿಮೇಂಟ್ ಮಾಡದೇ ಮತ್ತು ಸೌಲಭ್ಯಗಳನ್ನು ಸರಿಯಾಗಿ ಒದಗಿಸದೇ ಅನ್ಯಾಯ ಮಾಡುತ್ತಿದ್ದಾರೆ ಹಾಗೂ ಕೆಲವು ಬೇಡಿಕೆಗಳನ್ನು ಕೇಂದ್ರಸರಕಾರ ಹಾಗೂ ರಾಜ್ಯ ಸರಕಾರ ಈಡೇರಿಸ ಬೇಕು. ಕಾನೂನಗಳನ್ನು ಜಾರಿಗೆ ಮಾಡದೇಅನ್ಯಾಯ ಮಾಡುತ್ತಿರುವ ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಒತ್ತಾಯವಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ, ಎಸ್.ಫಕ್ಕಿರಪ್ಪ, ತಾಲೂಕ ಅಧ್ಯಕ್ಷ ಬಸವರಾಜ ಹರಿಜನ, ಬಸವಂತಪ್ಪ ಮಡ್ಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ತೀರುಪತಿ ಕೊಂಡ್ಲಿ, ಜಿಲ್ಲಾ ದಲಿತ ಯುವ ಒಕ್ಕೂಟ ಅಧ್ಯಕ್ಷ ಬಸವರಾಜ ಹಳ್ಳೆಮ್ಮನವರ, ಮಂಜುನಾಥ ಹರಿಜನ, ಭಾಸ್ಕರ ಭೋವಿ, ಮಂಜುನಾಥ ಹರಿಜನ, ಮೈಲಾರಿ ದೇವರಮನಿ, ಯಮುನಾಬಿ ಶಿಂದೆ, ಲಕ್ಷ್ಮೀಬಾಯಿ ರಾಠೋಡ, ಗಿರಿಜವ್ವಾ ಜೋಗೆರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು