ಶ್ರೀನಿವಾಸಪುರ: ತಾಲ್ಲೂಕಿನ ಬಂಡಪಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 7 ಮಂದಿ ಸದಸ್ಯರು ಆಯ್ಕೆಯಾಗಿದ್ದಾರೆ. ಒಟ್ಟು 12 ಸದಸ್ಯರ ಪೈಕಿ 5 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಿ.ಎಂ.ವೆಂಕಟರೆಡ್ಡಿ, ಚೊಕ್ಕಿರೆಡ್ಡಿ, ಬಿ.ಎಂ.ನಾರಾಯಣಸ್ವಾಮಿ, ಬಿ.ಎನ್.ಶ್ರೀನಿವಾಸರೆಡ್ಡಿ, ಬಿ.ವಿ.ಶಂಕರಪ್ಪ, ಬಿ.ವಿ.ವೀರನಾರಾಯಣಸ್ವಾಮಿ, ಬಿ.ಇ.ಮುನಿರೆಡ್ಡಿ (ಚುನಾಯಿತ ಸದಸ್ಯರು)
ಶಿಕ್ಷಕ ಎನ್.ಎಸ್.ಲೋಕೇಶ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಮುಖಂಡರಾದ ಬಿ.ಇ.ಮಂಜುನಾಥರೆಡ್ಡಿ, ಬಿ.ವೆಂಕಟಸ್ವಾಮಿ, ಬಿ.ಎನ್.ನಾರಾಯಣಸ್ವಾಮಿ, ಡಿ.ಎನ್.ಗೋವಿಂದರೆಡ್ಡಿ, ಬಿ.ವಿ.ಸುರೇಶ್ ರೆಡ್ಡಿ, ಬಿ.ವೆಂಕಟಶಾಮಿರೆಡ್ಡಿ, ಬಿ.ಎಸ್.ಬೈರೆಡ್ಡಿ, ಬಿ.ಎನ್.ಆಂಜಪ್ಪ, ಬಿ.ಎಸ್.ಚೌಡರೆಡ್ಡಿ, ಸಿ.ವಿ.ಚೌಡರೆಡ್ಡಿ, ಶೈಲಜ ಇದ್ದರು.