ಕೋಲಾರ : ನಗರದ ರಹಮತ್ ನಗರ ನಿವಾಸಿಯಾದ ಚಾಂದ್ ಪಾಷ ರವರಿಗೆ ಹೃದಯ ಸಂಬಂಧಿ ಕಾಯಿಲೆ ಚಿಕಿತ್ಸೆಗಾಗಿ ರಾಜ್ಯ ವಕ್ಛ್ ಕೌಂನ್ಸಿಲ್ ವತಿಯಿಂದ ಐವತ್ತು ಸಾವಿರ ರೂಗಳ ಸಹಾಯಧನದ ಚೆಕ್ ವಿತರಿಸಲಾಯಿತು.
ರಾಜ್ಯ ವಕ್ಛ್ ಕೌಂನ್ಸಿಲ್ ಸದಸ್ಯ ಕೋಲಾರದ ನುಸರತ್ ಪಾಷ ತಮ್ಮ ಇಲಾಖೆಯ ವತಿಯಿಂದ ಚಾಂದ್ ಪಾಷ ರಿಗೆ ಹೃದಯ ಸಂಬಂಧಿ ಕಾಯಿಲೆ ಹೆಚ್ಚಿನ ಚಿಕಿತ್ಸೆಗಾಗಿ 50 ಸಾವಿರ ರುಪಾಯಿಗಳ ಸಹಾಯಧನದ ಚೆಕ್ÀÀನ್ನು ನೀಡಿದರು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಮುಖಂಡರಾದ ಮುಜಮಿಲ್ ಪಾಷ, ಅಮೀರ್ ಪಾಷ, ಸಾಧೀಕ್ ಪಾಷ, ಜಹೀರ್ ಅಹಮದ್ ಮುಂತಾದವರು ಹಾಜರಿದ್ದರು.