ಕೋಲಾರ:- ಕರ್ನಾಟಕ ರಾಜ್ಯ ಶಿಕ್ಷಣಾಧಿಕಾರಿಗಳ ಸಂಘದ ನೂತನ ಅಧ್ಯಕ್ಷರಾಗಿ ಅಧ್ಯಕ್ಷರಾಗಿ ಕೆ.ಜಿ.ಆಂಜಿನಪ್ಪ ಅವರು ಸರ್ವಾನುಮತದಿಂದ ಆಯ್ಕೆಯಾದರು.
ಬೆಂಗಳೂರಿನಮ ಮಲ್ಲೇಶ್ವರಂ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಸಂಘದ ಹಿರಿಯ ಮುಖಂಡರಾದ ಎಂ.ಪಿ.ಮಾದೇಗೌಡ, ಚೆನ್ನಬಸಪ್ಪ ಇವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಸಂಘದ ಗೌರವಾಧ್ಯಕ್ಷರಾಗಿ ಫಿಲೋಮಿನಾ ಲೋಬೋ, ಕಮಲಾಕರ್ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಸಿ.ಎನ್.ಗೋವಿಂದಪ್ಪ, ಜಿ.ಎಂ.ಮುಂದಿನ ಮನಿ, ಪ್ರಧಾನ ಕಾರ್ಯದರ್ಶಿಯಾಗಿ ರಾಜ್ಕುಮಾರ್, ಸಹ ಕಾರ್ಯದರ್ಶಿಯಾಗಿ ಹೆಚ್.ಎಸ್.ದೇಶಮುಖ್, ಖಜಾಂಚಿಯಾಗಿ ಜಿ.ಸಿ.ಪಂಕಜ ಸರ್ವಾನುಮತದಿಂದ ಆಯ್ಕೆಯಾದರು.
ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾಗಿ ಹೊಸಪೇಟೆ ಶೇಖರ್, ಆರ್.ಎನ್.ಹುರಳಿ, ಐ.ಆರ್. ಅಕ್ಕಿ, ಚಿಕ್ಕಸ್ವಾಮಿ, ವಿಭಾಗೀಯ ಸಂಘಟನಾ ಕಾರ್ಯದರ್ಶಿಗಳಾಗಿ ಮೈಸೂರು ವಿಭಾಗಕ್ಕೆ ಎಸ್.ಆರ್.ಲೋಕೇಶ್, ಬೆಂಗಳೂರು ವಿಭಾಗಕ್ಕೆ ಎಂ.ಗೋಪಾಲಕೃಷ್ಣ, ಬೆಳಗಾಂ ವಿಭಾಗಕ್ಕೆ ಅರ್ಜುನಾ ಕಾಂಬೋಗಿ, ಗುಲ್ಬರ್ಗ ವಿಭಾಗಕ್ಕೆ ಅಬ್ದುಲ್ ಘನಿ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆ.ಆರ್.ಶಿವಕುಮಾರ್, ಎಸ್.ಸಿ.ಉಮಾದೇವಿ, ನಸ್ರೀನ್ ತಾಜ್, ಆರ್.ಎನ್.ಶೈಲಾ, ಪ್ರಶಾಂತ್,ಸಿದ್ದರಾಜು, ವಿಭೂತಿ, ಡಾ.ದೊಡ್ಡೆ, ಬಂಗಾರಿಮಠ್, ಮಧು ಮಾಲತಿ ಪಡುವಣಿ, ಬಿಇಒ ರಮೇಶಯ್ಯ ಆಯ್ಕೆಯಾಗಿದ್ದಾರೆ ಎಂದು ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಆರ್.ಶಿವಕುಮಾರ್ ತಿಳಿಸಿದ್ದಾರೆ.
ಸಭೆಯಲ್ಲಿ ಕೋಲಾರ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಶಿಕ್ಷಣಾಧಿಕಾರಿಗಳು ಹಾಜರಿದ್ದರು.
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ.