ಕೋಲಾರ: ಪ್ರಾಮಾಣಿಕತೆ ಮೆರೆದ ಮುಖ್ಯಪೇದೆ ಮೆಹಬೂಬ್- ಮೊಬೈಲ್ ಕಳೆದುಕೊಂಡವರನ್ನು ಹುಡುಕಿ ಹಸ್ತಂತರ

Source: shabbir | By Arshad Koppa | Published on 19th November 2017, 8:35 AM | State News |

ಕೋಲಾರ:- ತಮ್ಮ ಕುಟುಂಬದವರೊಬ್ಬರ ಆರೋಗ್ಯ ತಪಾಸಣೆಗೆಂದು ನಗರಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ಕಳೆದುಕೊಂಡಿದ್ದ ಮೊಬೈಲ್‍ಅನ್ನು ವ್ಯಕ್ತಿಯ ವಿಳಾಸ ಹುಡುಕಿ ಕರೆಸಿ ವಾಪಸ್ಸು ನೀಡುವ ಮೂಲಕ ನಗರದ ಸಂಚಾರಿ ಠಾಣೆಯ ಮುಖ್ಯಪೇದೆ ಬಿ.ಎನ್.ಮೆಹಬೂಬ್ ಪ್ರಾಮಾಣಿಕತೆ ಮೆರೆದಿದ್ದಾರೆ.
ನಗರದ ಸಂಚಾರಿ ದಟ್ಟಣೆ ತಡೆಯುವಲ್ಲಿ ಹಾಗೂ ಸಂಚಾರಿ ಸಿಗ್ನಲ್‍ಗಳ ಪಾಲನೆಯ ಮೂಲಕ ನಗರದಲ್ಲಿ ಹೆಸರು ಗಳಿಸಿರುವ ಮೆಹಬೂಬ್ ಈಗಾಗಲೇ ಉತ್ತಮ ಸೇವೆಗಾಗಿ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.
ಮೆಹಬೂಬ್ ಅವರಿಗೆ  ನಗರದ ಬಸ್ ನಿಲ್ದಾನದ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಮೊಬೈಲ್ ಒಂದು ಸಿಕಿತೆನ್ನಲಾಗಿದೆ.
ಕೂಡಲೇ ಮೊಬೈಲ್ ಪಡೆದ ಮೆಹಬೂಬ್ ಸದರಿ ಮೊಬೈಲ್‍ನ ಮಾಲೀಕರನ್ನು ಹುಡುಕುವ ಯತ್ನ ನಡೆಸಿದಾಗ ಅದು ಚಿಂತಾಮಣಿ ತಾಲ್ಲೂಕಿನ ವೆಂಕಟರಾಯನ ಕೋಟೆ ಗ್ರಾಮದ ಕೋನಪ್ಪರೆಡ್ಡಿ ಬಿನ್ ಚಿನ್ನವೆಂಕಟಸ್ವಾಮಿ ಎಂಬುವವರದೆಂದು ತಿಳಿದು ಬಂದಿದೆ.
ಸದರಿ ವ್ಯಕ್ತಿ ತಮ್ಮ ಮಾವನ ಚಿಕಿತ್ಸೆಗೆಂದು ಖಾಸಗಿ ನರ್ಸಿಂಗ್ ಹೋಂಗೆ ಬಂದಿದ್ದು, ಚಿಕಿತ್ಸೆ ಪಡೆದು ವಾಪಸ್ಸಾಗುವಾಗ ಮೊಬೈಲ್ ಪೋನ್ ಕಳೆದುಕೊಂಡಿದ್ದಾರೆನ್ನಲಾಗಿದೆ.
ಪೋನಿನ ಮಾಲೀಕರನ್ನು ಸಂಚಾರಿ ಠಾಣೆಗೆ ಕರೆಸಿ ಅವರಿಗೆ ಮೊಬೈಲ್ ಹಸ್ತಂತರಿಸುವ ಮೂಲಕ ಮೆಹಬೂಬ್ ಸಾಮಾಜಿಕ ಕಾಳಜಿ ಹಾಗೂ ಪ್ರಾಮಾಣಿಕತೆ ಮೆರೆದಿದ್ದಾರೆ. 
ಈ ಸಂದರ್ಭದಲ್ಲಿ ಪಿಎಸ್‍ಐ ಶ್ರೀನಿವಾಸ್, ಚಾಲಕ ವೆಂಕಟೇಶ್, ಪೇದೆ ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು. 

 

ವರದಿ: ಮೊಹಮ್ಮದ್ ಶಬ್ಬೀರ್ ಶ್ರೀನಿವಾಸಪುರ.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...