ಕೆ.ಸಿ.ವ್ಯಾಲಿ ನೀರು ಮೂರು ಬಾರಿ ಶುದ್ದೀಕರಿಸಿ ಹರಿಸಿ ನೀಡಿ, ಇಲ್ಲವಾದರೆ ಬದುಕಲು ಬೇರೆ ಸ್ಥಳವನ್ನು ನೀಡಿ

Source: sonews | By Staff Correspondent | Published on 28th July 2018, 11:31 PM | State News | Don't Miss |

ಕೋಲಾರ :  ಕೆ.ಸಿ.ವ್ಯಾಲಿ ನೀರನ್ನು ಒಂದು ಬಾರಿಯೂ ಶುದ್ಧೀಕರಿಸಿದೆ ಕೆರೆಗಳಿಗೆ ಹರಿಸುತ್ತಿದ್ದು, ಈ ನೀರು ವಿಷಪೂರಿತ ನೊರೆಯಾಗಿದ್ದು, ಈ ನೀರನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ನರಸಾಪುರ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.
    
ನರಸಾಪುರ ಗ್ರಾಮಸ್ಥರು ಅಪರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಕೆ.ಸಿ.ವ್ಯಾಲಿಯ ನೀರು ಈ ಜಿಲ್ಲೆಗೆ ಕೊಟ್ಟಿರುವುದು ಸಂತಸ. ಆದರೆ ಈ ನೀರು ಬಹಳ ವಿಷಯುಕ್ತ ಖನಿಜಾಂಶಗಳುಳ್ಳ ನೀರಾಗಿದ್ದು, ಕೇವಲ ಎರಡು ಬಾರಿ ಶುದ್ದೀಕರಿಸಿ ಕೊಡುವ ನೀರಾಗಿದ್ದು, ಆದರೆ ಇತ್ತೀಚೆಗೆ ಬಂದ ನೊರೆ ಈ ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿತ್ತು. ಇದನ್ನು ಒಂದು ಬಾರಿಯು ಸಹ ಶುದ್ದೀಕರಿಸದೇ ನೇರವಾಗಿ ಸುತ್ತಮುತ್ತಲಿನ ಕೆರೆಗೆ ಹರಿಸಿದ್ದಾರೆ ಎಂದು ದೂರಿದರು. 

ಅಲ್ಲದೆ ಇದರ ಪರಿಣಾಮ ಸುತ್ತಮುತ್ತಲಿನ ಪ್ರದೇಶ ವಾಸನೆಯುಕ್ತ ಪ್ರದೇಶವಾಗಿದೆ. ಇಲ್ಲಿನ ಜನರು ದುರ್ವಾಸನೆಯಿಂದ ತುಂಬಾ ನೊಂದಿದ್ದಾರೆ. ಜೊತೆಗೆ ಪ್ರಾಣಿ ಪಕ್ಷಿಗಳು ಈ ವಿಷಯುಕ್ತ ನೀರನ್ನು ಕುಡಿಯುತ್ತಿರುವುದರಿಂದ ಜೀವರಾಶಿಗಳಿಗೆ ಮುಂದಿನ ದಿನಗಳಲ್ಲಿ ರೋಗ ರುಜನೆಗಳು ಬರುವ ಸಾಧ್ಯತೆ ಇದ್ದು, ಇತ್ತೀಚೆಗೆ ಕೆಲವು ಹಾವುಗಳು ಈ ನೀರಿನಲ್ಲಿ ಸತ್ತಿದ್ದು ಕಂಡುಬಂದಿದ್ದು, ಸುತ್ತಲಿನ ಗ್ರಾಮಸ್ಥರು ಕಂಗಾಲಾಗಿದ್ದಾರೆ.
    
ಜಿಲ್ಲಾಧಿಕಾರಿಗಳು ತಕ್ಷಣವೇ ತಮ್ಮ ಮುಖಾಂತರ ಸರ್ಕಾರಕ್ಕೆ ಈ ಕೆ.ಸಿ.ವ್ಯಾಲಿ ನೀರನ್ನು ಮೂರು ಬಾರಿ ಶುದ್ದೀಕರಿಸಿಕೊಡಬೇಕು ಇಲ್ಲವಾದಲ್ಲಿ ನಮಗೆ ಬದುಕಲು ಬೇರೆ ಸ್ಥಳಗಳನ್ನು ಆಯ್ಕೆ ಮಾಡಿಕೊಡಬೇಕೆಂದು ಒತ್ತಾಯಿಸಿದರು.
    
ಈ ಸಂದರ್ಭದಲ್ಲಿ ನರಸಾಪುರ ನಾರಾಯಣಸ್ವಾಮಿ, ಸೋಮಣ್ಣ, ನಂದೀಶಯ್ಯ, ರಾಮಸಂದ್ರ ರವಿಕುಮಾರ್, ಕಲ್ವಮಂಜಲಿ ನರಸಿಂಹ, ರೈತ ಸಂಘದ ಕಲ್ವಮಂಜಲಿ ರಾಮುಶಿವಣ್ಣ, ಜಿ. ನಾರಾಯಣಸ್ವಾಮಿ, ನಗರ ಸಂಚಾಲಕ ಅಬೀದ್ ಖಾನ್, ಫಿರ್ದೋಸ್, ಡಾ|| ಶಿವಣ್ಣ (ಎಸ್.ಎನ್.ಆರ್), ಹೂಹಳ್ಳಿ ಪ್ರಕಾಶ್,  ಕುರುಬರಪೇಟೆ ವೆಂಕಟೇಶ್, ಅಹಿಂದ ಮಂಜುನಾಥ್, ಚಿನ್ನಿ ಶ್ರೀನಿವಾಸ್, ಬಾಬು, ಮುನಿರಾಜು, ಮೂರ್ತಿ, ಪ್ರಕಾಶ್, ಸತೀಶ್ ಮತ್ತಿತರರು ಉಪಸ್ಥಿತರಿದ್ದರು

                                    
 

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...