ಕಾರವಾರ: ಪ್ರತಿಷ್ಟಿತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಸುಕ್ರಿಬೊಮ್ಮ ಗೌಡ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ನಮ್ಮ ಉತ್ತರ ಕನ್ನಡ ಜಿಲ್ಲೆಯ ಜಾನಪದ ಕೋಗಿಲೆಯೆಂದೇ ಖ್ಯಾತರಾಗಿರುವ ಅತ್ಯಂತಮುಗ್ಧ ಹಾಲಕ್ಕಿ ಕುಟುಂಬದಿಂದ ಬಂದು ಪ್ರಸ್ತುತ ರಾಷ್ಟ್ರದ ಉತ್ಕೃಷ್ಟ ಪ್ರಶಸ್ತಿಯಾದ ಪದ್ಮಶ್ರೀಗೆ ಬಾಜನರಾದ ಶ್ರೀಮತಿ ಸುಕ್ರಿ ಬೊಮ್ಮ ಗೌಡ ಅವರಿಗೆ ನನ್ನ ಹಾರ್ದಿಕ ಅಭಿನಂದನೆಗಳು.
ಸುಕ್ರಿ ಬೊಮ್ಮ ಗೌಡ ಅವರು ಕಡು ಬಡುತನವನ್ನು ಲೆಕ್ಕಿಸದೆ ಅತ್ಯಂತ ಕಾಳಜಿಯಿಂದ ಕಲಾ ಸರಸ್ವತಿಯನ್ನು ಒಲಿಸಿಕೊಂಡು ಸಾಮಾನ್ಯ ಬದುಕನ್ನು ಸವೆಸುತ್ತಲೇ, ರಾಷ್ಟ್ರ ಮಟ್ಟದ ಗಮನ ಸೆಳೆಯುವಂತಹ ಈ ಸಾಧನೆಯನ್ನು ಮಾಡಿರುವುದು ನಮಗೆಲ್ಲರಿಗೂ ಅಭಿಮಾನದ ಸಂತಸದ ಸಂಗತಿಯಾಗಿದೆ. ದೇವರು ಅವರಿಗೆ ಇನ್ನೂ ಹೆಚ್ಚಿನ ಕಲಾ ಸೇವೆಯನ್ನು ಮಾಡಲು ಅನುವಾಗುವಂತೆ ಆಯುರಾರೋಗ್ಯವನ್ನು ಕರುಣಿಸಲಿ ಎಂದು ಸಚಿವರು ತಮ್ಮ ಶುಭ ಸಂದೇಶದಲ್ಲಿ ಹಾರೈಸಿದ್ದಾರೆ.