ಜೋಧಪುರ್: ಪಶ್ಚಿಮ ಬಂಗಾಳದ ಮುಸ್ಲಿಂ ಕಾರ್ಮಿಕನೊಬ್ಬನನ್ನು ಹತ್ಯೆಗೈದು ನಂತರ ದೇಹಕ್ಕೆ ಬೆಂಕಿ ಹಚ್ಚಿ ಸುಟ್ಟ ಆರೋಪ ಹೊತ್ತ ರಾಜಸ್ಥಾನದ ಶಂಭುಲಾಲ್ ಬಗೆಗಿನ ಟ್ಯಾಬ್ಲೋ ಒಂದು ಜೋಧಪುರ್ ದಲ್ಲಿ ನಡೆದ ರಾಮನವಮಿ ಮೆರವಣಿಗೆಯ ಭಾಗವಾಗಿರುವುದು ಸಾಕಷ್ಟು ಆಕ್ರೋಶ ಮೂಡಿಸಿದೆ.
ಆರೋಪಿ ಶಂಭುಲಾಲ್ ತನ್ನ ಹೇಯ ಕೃತ್ಯದ ವೀಡಿಯೋವನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ಎಲ್ಲರ ಕೆಂಗಣ್ಣಿಗೂ ಗುರಿಯಾಗಿದ್ದ. ಘಟನೆ ರಾಜ್ಸಮಂಡ್ ಜಿಲ್ಲೆಯಿಂದ ವರದಿಯಾಗಿತ್ತು.
ಆರೋಪಿ ಶಂಭುಲಾಲ್ ಡಿಸೆಂಬರ್ 2017ರಿಂದ ಜೈಲಿನಲ್ಲಿದ್ದಾನೆ.