ಹುಬ್ಬಳ್ಳಿ, ಆ ೧೧: ಜಿಲ್ಲೆಯಲ್ಲಿ ಅನ್ನದಾತರ ಆತ್ಮಹತ್ಯೆ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿದ್ದು ಆತಂಕಕಾರಿ ವಾತಾವರಣ ಸೃಷ್ಟಿಯಾಗಿದೆ. .
ನವಲಗುಂದ ತಾಲೂಕಿನ ಹಾಸಕುಸುಗಲ್ ಗ್ರಾಮದಲ್ಲಿ ರೈತರೊಬ್ಬರು ಮರಕ್ಕೆ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾರೆ.
ಅಚೀತ ಕೃಷ್ಣರೆಡ್ಡಿ ಗಿರಡ್ಡಿ (೩೬) ಎಂಬುವರೇ ಆತ್ಮಹತ್ಯೆಗೆ ಶರಣಾದ ರೈತರಾಗಿದ್ದು ಇವರು
ಹಳ್ಳಿಕೇರಿ ಗ್ರಾಮದ ಅಚೀತ ಹಾಳಕುಸುಗಲ್ ಗ್ರಾಮದ ಶ್ಯಾನಕೋಟಿ ಅವರ ಜಮೀನಿನಲ್ಲಿರುವ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ.
ಸಹಕಾರಿ ಬ್ಯಾಂಕ್ , ಕೈಗಡ ಸೇರಿದಂತೆ ಹಲವೆಡೆ ಒಟ್ಟು ೨.೪೬ ಲಕ್ಷ ರೂ ಸಾಲ ಮಾಡಿದ್ದು ಸಾಲ ತೀರಿಸಲಾಗದ ಭಯವೇ ಆತ್ಮಹತ್ಯೆಗೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ.
ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.