ದುಬೈ:  ಹೆಚ್.ಎಂ.ಸಿ. ಯುನೈಟೆಡ್ ವತಿಯಿಂದ ಸರ್ವಧರ್ಮ ಸೌಹಾರ್ಧಇಫ್ತಾರ್‍ಕೂಟ

Source: ganesh rai | By Arshad Koppa | Published on 20th June 2017, 7:05 AM | Gulf News | Special Report | Guest Editorial |

ದುಬೈ, ಜೂ ೧೯: ಪವಿತ್ರರಂಜಾನ್ ಮಾಸಾಚರಣೆಯ ಶುಭ ಸಂದರ್ಭದಲ್ಲಿದುಬಾಯಿಗ್ರಾಂಡ್ ಎಕ್ಸ್ಲೆಸಿಯರ್ ಹೋಟೆಲ್ ಸಭಾಂಗಣದಲ್ಲಿ2017ಜೂನ್16ನೆ ತಾರೀಕು ಶುಕ್ರವಾರ ಸಂಜೆ6.00ಗಂಟೆಗೆ ಹೆಚ್.ಎಂ.ಸಿ. ಯುನೈಟೆಡ್‍ಆಶ್ರಯದಲ್ಲಿ ಸೌಹಾರ್ಧ ಇಫ್ತಾರ್ ಕೂಟವನ್ನುಆಯೋಜಿಸಲಾಗಿತ್ತು.

ಹೆಚ್.ಎಂ.ಸಿ. ಯುನೈಟೆಡ್ - ಹಿಂದೂ ಮುಸ್ಲಿಂ ಕ್ರೈಸ್ತಒಗ್ಗೂಡಿ ಸಂಘಟಿತರಾದ ವೇದಿಕೆ ಕಳೆದ ಹಲವು ವರ್ಷಗಳಿಂದ ಕರಾವಳಿ ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಕ್ರೀಡೋತ್ಸವ, ಕ್ರಿಕೆಟ್ ಪಂದ್ಯಾಟ, ರಾಜ್ಯಮಟ್ಟದಲ್ಲಿ ಕ್ರೀಡಾಪಟುಗಳಿಗೆ ಪ್ರಶಸ್ತಿ ಪ್ರಧಾನ ಸಮಾರಂಭಗಳನ್ನು ಅಯೋಜಿಸಿಕೊಂಡು ಯಶಸ್ವಿಯಾಗಿ ನಡೆಸಿರುವ ಕೀರ್ತಿ ಹೆಚ್.ಎಂ. ಸಿ. ಯುನೈಟೆಡ್‍ಗೆ ಸಲ್ಲುತ್ತದೆ.
ದುಬಾಯಿಯಲ್ಲಿ ಪ್ರಥಮ ಬಾರಿಗೆ ಏರ್ಪಡಿಸಿದ ಇಫ್ತಾರ್ ಕೂಟಕ್ಕೆಯು.ಎ.ಇ. ಯ ವಿವಿಧ ಭಾಗಗಳಿಂದ ಸರ್ವಧರ್ಮದ ಆಹ್ವಾನಿತ ಅತಿಥಿಗಳು ಆಗಮಿಸಿದ್ದರು. ಶ್ರೀಮತಿ ಭವಿತ ಪಾಂಚಾಲ್‍ರವರ ಸ್ವಾಗತದೊಂದಿಗೆಕಾರ್ಯಕ್ರಮ ಪ್ರಾರಂಭವಾಯಿತು. ಮಾಸ್ಟರ್‍ಯೂಸುಫ್ ನಸರ್ ಆಲಿ ಯೂಸುಫ್‍ಕುರಾನ್ ಪಠಣದೊಂದಿಗೆಇಫ್ತಾರ್‍ಕೂಟಕ್ಕೆ ಚಾಲನೆ ನೀಡಲಾಯಿತು. ಪವಿತ್ರರಮದಾನ್ ಮಾಸಾಚರಣೆಯಯ ಬಗ್ಗೆ ಲೇಖಕರು, ಸಾಹಿಲ ಆನ್ ಲೈನ್ ಮಾಧ್ಯಮದ ಕನ್ನಡ ವಿಭಾಗದ ಉಪಸಂಪಾದಕರಾದ ಶ್ರೀ ಆರ್ಶದ್ ಹುಸೈನ್‍ರವರು ಶುಭ ಸಂದೇಶವನ್ನು ನೀಡಿದರು. ಇಫ್ತಾರ್‍ ಉಪವಾಸವನ್ನು ಅಂತ್ಯಗೊಳಿಸಿ ಉಪಹಾರ ಸ್ವೀಕರಿಸಿ, ನಮಾಜ್ ಮುಗಿಸಿದ ನಂತರ ದ್ವಿತೀಯ ಹಂತದ ಸಭಾಕಾರ್ಯಕ್ರಮ ಮುಂದುವರೆಸಲಾಯಿತು. ಶ್ರೀ ಹರೀಶ್ ಶೇರಿಗಾರ್ ನಿರ್ಮಾಣದ "ಮಾರ್ಚ್22" ಕನ್ನಡ ಚಲನಚಿತ್ರ ಸರ್ವಧರ್ಮ ಸಮನ್ವಯದ ಹಿನ್ನೆಲೆಯಲ್ಲಿ ಚಿತ್ರಿಕರಣವಾಗಿದ್ದು,ಡಾ. ಬಿ ಆರ್. ಶೆಟ್ಟಿಯವರು ವಿಶೇಷ  ಫಕೀರನ ಪಾತ್ರದಲ್ಲಿ ನಟಿಸಿರುವ ಅರ್ಥಪೂರ್ಣ ಭಾವೈಕ್ಯತೆಯಗೀತೆಯ ಭಾಗವನ್ನು ಪರದೆಯ ಮೇಲೆ ಪ್ರದರ್ಶಿಸಲಾಯಿತು.
ವೇದಿಕೆಯಲ್ಲಿ ಹೆಚ್.ಎಂ.ಸಿ. ಯುನೈಟೆಡ್ ಅಧ್ಯಕ್ಷರು ಶ್ರೀ ಕೆ. ಪಿ. ಇಬ್ರಾಹಿಂ ಮಟ್ಪಾಡಿ, ಗೌರವ ಅತಿಥಿಗಳಾದ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯು.ಎ.ಇ. ಅಧ್ಯಕ್ಷರು ಹಾಗೂ ಫಾರ್ಚೂನ್‍ಗ್ರೂಫ್‍ಆಫ್ ಹೋಟೆಲ್ಸ್‍ಚೇರ್ಮೆನ್ ಶ್ರೀ ಪ್ರವೀಣ್‍ಕುಮಾರ್ ಶೆಟ್ಟಿ, ಮೆಲುವಾ ಸಿಗಾರ್ ಬ್ರಾಂಡ್‍ಓನರ್, ಕ್ವೀನ್ ಬೀ ಪ್ರಾಡಕ್ಟ್ಸ್‍ಎಕ್ಸಿಕ್ಯೂಟಿವ್‍ಡೈರೆಕ್ಟರ್ ಶ್ರೀ ಯೋಗೇಶ್‍ದೇಶಪಾಂಡೆ, ಆಕ್ಮೆ ಬಿಲ್ಡಿಂಗ್ ಮೆಟೆರಿಯಲ್ಸ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕೆ.ಎನ್.ಆರ್.ಐ. ಉಪಾಧ್ಯಕ್ಷರು ಶ್ರೀ ಹರೀಶ್ ಶೇರಿಗಾರ್, ಅಬುಧಾಬಿ ಕರ್ನಾಟಕ ಸಂಘದಅಧ್ಯಕ್ಷರು, ಕೆ.ಎನ್.ಆರ್.ಐ. ಉಪಾಧ್ಯಕ್ಷರು ಶ್ರೀ ಸರ್ವೋತ್ತಮ ಶೆಟ್ಟಿ, ಬ್ಯಾರೀಸ್ ವೆಲ್ಫೆರ್ ಫೋರಂಅಬುಧಾಬಿ ಅಧ್ಯಕ್ಷರು ಶ್ರೀ ಮಹಮ್ಮದ್ ಆಲಿ ಉಚ್ಚಿಲ, ಶಾರ್ಜಾದುಬಾಯಿರಾಯಲ್‍ಡೈಮಂಡ್ಸ್‍ಚೇರ್ಮನ್ ಶ್ರೀ ಇಮ್ರಾನ್‍ಖಾನ್, ಕೆ.ಎನ್.ಆರ್.ಐ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಭಾಕರ ಅಂಬಲ್ತೆರೆ, ರೇಡಿಯಂಟ್ ಸ್ಟಾರ್‍ಗ್ರೂಪ್‍ಆಫ್ ಕಂಪೆನಿ ಸಿ ಇಒ. ಶ್ರೀ ಶಾಂತಾರಾಂ ಶೆಟ್ಟಿ, ಶ್ರೀ ಸುನಿಲ್ ಬಾಗಲ್ಕೊಟ್, ಮತ್ತು ಶ್ರೀ ಸಿರೆಮಿಕಾ ಗ್ರೂಪ್ ಮಸ್ಕಟ್, ಚೇರ್ಮನ್ ಶ್ರೀ ಅಹ್ಮದ್ ನುಚಿಕಲತ್ ಆಸೀನರಾಗಿದ್ದರು.

ಹೆಚ್.ಎಂ.ಸಿ. ಯುನೈಟೆಡ್ ಸ್ಥಾಪಕರಲ್ಲಿಓರ್ವರಾದ ಸಂಘಟಕರಾದ ಶ್ರೀ ಶಕೀಲ್ ಹಸನ್‍ರವರುತಮ್ಮ ಪ್ರಾಸ್ತವಿಕ ಭಾಷಣದಲ್ಲಿ ಹೆಚ್.ಎಂ.ಸಿ. ಯುನೈಟೆಡ್  ಹಿಂದೂ ಮುಸ್ಲಿಂ ಕ್ರೈಸ್ತ ಸಂಘಟನೆಯನ್ನು ಕರಾವಳಿ ಕರ್ನಾಟಕದ ಬ್ರಹ್ಮಾವರದಲ್ಲಿ ಸ್ಥಾಪಿಸಿ ಧ್ಯೆಯೋದ್ದೇಶಗಳು ಹಾಗೂ ಕಾರ್ಯಯೋಜನೆಗಳನ್ನು ಹಾಕಿಕೊಂಡು ಯಶಸ್ವಿ ಹೆಜ್ಜೆಗಳನ್ನು ಇಟ್ಟು ಮುನ್ನಡೆದ ಬಗ್ಗೆ ವಿವರವಾಗಿತಿಳಿಸಿ,ಇದೀಗ ದುಬಾಯಿಯಲ್ಲಿ ಪ್ರಥಮ ಬಾರಿಗೆಇಫ್ತಾರ್‍ಕೂಟವನ್ನುಆಯೋಜಿಸಲುತಮ್ಮಕಾರ್ಯಕಾರಿ ಸಮಿತಿಯ ಸಹಕಾರದಕೊಡುಗೆಯನ್ನು ಶ್ಲಾಘಿಸಿ, ಸಭೆಗೆ ಆಗಮಿಸಿದ ಸರ್ವರಿಗೂ ಶುಭವನ್ನು ಹಾರೈಸಿದರು.
ಗೌರವ ಅತಿಥಿಗಳು ಪವಿತ್ರರಮದಾನ್ ಮಾಸದ ಶುಭ ಸಂದೇಶವನ್ನು ನೀಡಿದರು. 
ಗೌರವ ಅತಿಥಿಗಳು ಮತ್ತು ಕಾರ್ಯಕರ್ತರಿಗೆ ಅಭಿನಂದನಾ ಸ್ಮರಣಿಕೆಪತ್ರವನ್ನು ನೀಡಿಗೌರವಿಸಲಾಯಿತು.
ಇಫ್ತಾರ್‍ಕೂಟದಲ್ಲಿ ಮಾಧ್ಯಮ ಮಿತ್ರರು ಆಗಮಿಸಿ ತಮ್ಮ ಪೂರ್ಣ ಸಹಕಾರವನ್ನು ನೀಡಿದ್ದರು.
ಅತಿಥಿಗಳಲ್ಲಿ ಓರ್ವರಾದಕ್ರಿಯಾತ್ಮಕಕಲಾನಿರ್ದೇಶಕ, ಕೆ. ಎನ್. ಆರ್. ಐ. ಉಪಾಧ್ಯಕರಾದ ಶ್ರೀ ಬಿ. ಕೆ. ಗಣೇಶ್‍ರೈಯವರುಕಾರ್ಯಕ್ರಮ ನಿರೂಪಣೆಯನ್ನು ನಿರ್ವಹಿಸಿ, ಸರ್ವರಿಗೂ ವಂದನೆಗಳನ್ನು ಸಲ್ಲಿಸಿ ಶುಭಾಶಯಗಳನ್ನು ಕೋರಿದರು.
ಕೊನೆಯಲ್ಲಿ ಸ್ವಾದಿಷ್ಟ ಭೋಜನದ ವ್ಯವಸ್ಥೆಗೊಳಿಸಿದ್ದು ಸರ್ವರು ಸ್ವೀಕರಿಸಿದರು.
ಹೆಚ್.ಎಂ.ಸಿ. ಯುನೈಟೆಡ್‍ದುಬಾಯಿಘಟಕದಕಾರ್ಯಕಾರಿ ಸಮಿತಿಯ ಸರ್ವಸದಸ್ಯರ ಹಲವು ದಿನಗಳ ವ್ಯವಸ್ಥಿತ ಪೂರ್ವತಯಾರಿಯ ಫಲವಾಗಿ ದುಬಾಯಿಯಲ್ಲಿ ಪ್ರಥಮ ಬಾರಿಗೆ ನಡೆದ ಸರ್ವಧರ್ಮಇಫ್ತಾರ್‍ಕೂಟ ಐತಿಹಾಸಿಕ ದಾಖಲೆಗೆ ಸಾಕ್ಷಿಯಾಯಿತು.

- ಮಾಧ್ಯಮ ವರದಿ

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.

ಪ್ರವಾದಿ ಕುರಿತು ವಿವಾದಾತ್ಮಕ ಹೇಳಿಕೆಗೆ ಮುಂದುವರಿದ ಆಕ್ರೋಶ; 17 ದೇಶಗಳ ಖಂಡನೆ; ಗಲ್ಫ್ ಸಹಕಾರ ಮಂಡಳಿಯಿಂದಲೂ ಆಕ್ಷೇಪ

ತಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ ಎಂದು ಒತ್ತಿ ಹೇಳುವ ಮೂಲಕ ವಿವಿಧ ದೇಶಗಳಲ್ಲಿ ಭುಗಿಲೆದ್ದಿರುವ ಕ್ರೋಧದ ಅಲೆಯನ್ನು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...