ಮುಂಡಗೋಡ : ದೆಹಲಿಯ ದಲಿತ ಸಾಹಿತ್ಯ ಅಕಾಡೆಮಿಯವರು ಮುಂಡಗೋಡದ ಪತ್ರಕರ್ತ, ಸಾಹಿತಿ ರಾಜಶೇಖರ ನಾಯ್ಕ ಅವರಿಗೆ ಭಗವಾನ್ ಬುದ್ಧ ನ್ಯಾಶನಲ್ ಫೆಲೋಶಿಪ್ ಅವಾರ್ಡ ನೀಡಿದೆ.
ರಾಜಶೇಖರ ನಾಯ್ಕ ಅವರ ಪತ್ರಿಕಾರಂಗದಲ್ಲಿಯ ಅತ್ಯುತ್ತಮ ಸೇವೆಗಾಗಿ ಈ ಪ್ರಶಸ್ತಿ ನೀಡಲಾಗಿದೆ. ದೆಹಲಿಯ ದಲಿತ ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ ಡಿಸೆಂಬರ್ ೧೧-೧೨ರಂದು ದೆಹಲಿಯ ಪಂಚಶೀಲಾ ಆಶ್ರಮದಲ್ಲಿ ನಡೆಯುವ ೩೨ನೇ ರಾಷ್ಟ್ರೀಯ ದಲಿತ ಬರಹಗಾರರ ವಿಚಾರಗೋಷ್ಟಿಯಲ್ಲಿ ರಾಜಶೇಖರ ನಾಯ್ಕ ಅವರಿಗೆ ಈ ಪ್ರಶಸ್ತಿ ನೀಡಲಾಗುವುದು ಎಂದು ದೆಹಲಿಯ ದಲಿತ ಸಾಹಿತ್ಯ ಅಕಾಡೆಮಿಯ ರಾಷ್ಟ್ರೀಯ ಅಧ್ಯಕ್ಷ ಡಾ.ಎಸ್.ಪಿ.ಸುಮನಾಕ್ಷರ ತಿಳಿಸಿದ್ದಾರೆ.