ಕೋಲಾರ:ಕರ್ನಾಟಕದ ಇತಿಹಾಸದಲ್ಲಿ ಪ್ರಪಥಮ ಬಾರಿಗೆ ಆರ್ಯವೈಶ್ಯ ಅಭಿವೃದ್ಧಿ ನಿಗಮ ಸ್ಥಾಪನೆಗೆ ಶ್ರಮಪಟ್ಟವರಲ್ಲಿ ವಿಧಾಪರಿ ಪರಿಷತ್ ಸದಸ್ಯರಾದ ಡಾ|| ಟಿ.ಎ.ಶರವಣರವರು ಪ್ರಮುಖ ಪಾತ್ರವಹಿಸಿದ್ದು, ಅವರ ಶ್ರಮದ ಫಲವಾಗಿ ಇಂದು ಆರ್ಯವೈಶ್ಯ ಜನಾಂಗಕ್ಕೆ ಉಪಕಾರವಾಗಿದೆ ಎಂದು ಕರ್ನಾಟಕ ಆರ್ಯವೈಶ್ಯ ಮಹಾಮಂಡಳಿ ಜಿಲ್ಲಾಧ್ಯಕ್ಷರಾದ ಅಮರ್ನಾಥ್ ತಿಳಿಸಿದರು
ನಗರದ ಕನ್ಯಕಾಪರಮೇಶ್ವರಿ ದೇವಾಲಯದಲ್ಲಿ ಆರ್ಯವೈಶ್ಯ ಸಮುದಾಯದವರು ಪೂಜೆ ಸಲ್ಲಿಸಿ ನಂತರ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಹಿಳೆಯರು, ಮಹನೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮೆರವಣಿಗೆ ಮುಖಾಂತರ ಜಿಲ್ಲಾಧಿಕಾರಿಗಳ ಕಛೇರಿ ತಲುಪಿ ಪ್ರಭಾರ ಜಿಲ್ಲಾಧಿಕಾರಿ ಶುಭಕಲ್ಯಾಣ್ರವರ ಮುಖಾಂತರ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿರವರಿಗೆ ಅಭಿನಂಧನಾ ಪತ್ರವನ್ನು ಸಲ್ಲಿಸಿದರು.
ಮುಂದಿನ ದಿನಗಳಲ್ಲಿ ಆರ್ಯವೈಶ್ಯ ಯುವ ಸಮುದಾಯಕ್ಕೆ ಮೀಸಲಾತಿ ಮುಂತಾದ ಸೌಲಭ್ಯಗಳನ್ನು ಸಹ ಕಲ್ಪಿಸಬೇಕೆಂದು ಪತ್ರದಲ್ಲಿ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ನೇತೃತ್ವ ವಹಿಸಿದ್ದ ವಿ.ಪಿ.ಮುರಳಿಧರ್, ನಾಗಣಿ, ರವಿ, ಡಿ.ಜೆ.ಮನೋಹರ್, ಎ.ಎಂ. ಶ್ರೀನಿವಾಸಮೂರ್ತಿ, ರೂಪೇಶ್ ಮತ್ತು ವಾಸವಿ ಕ್ಲಬ್ನ ಓಂ ಪ್ರಕಾಶ್, ವಿ.ಪಿ.ಸೋಮಶೇಖರ್,ಸಿ.ಬಿ.ಎಸ್.ಆರ್.ಗುಪ್ತ ಅಲ್ಲದೆ ಮಹಿಳಾ ವಿಭಾಗದ ಭಾನುರೇಖಾ, ಶೋಭ, ದೀಪಿಕಾಲಕ್ಷ್ಮಿ ಮುಂತಾದವರು ಭಾಗವಹಿಸಿದ್ದರು