ಧಾರವಾಡ: ನಿರ್ಮಾಣ ಹಂತದಲ್ಲಿರುವ ಬಹುಮಹಾಡಿ ಕಟ್ಟಡವೊಂದು ಮಂಗಳವಾರ ಸಂಜೆ ಕುಸಿದು ಬಿದ್ದಿರುವ ಘಟನೆ ಧಾರವಾಡದ ಕುಮಾರೇಶ್ವರ ನಗದಲ್ಲಿ ವರದಿಯಾಗಿದ್ದು ಸಾವುನೋವಿನ ಕುರಿತು ಯಾವುದೇ ಅಂಕಿಅಂಶ ಲಭ್ಯವಾಗಿಲ್ಲ
ಒಟ್ಟು ಏಳು ಅಂತಸ್ತಿನ ಕಟ್ಟಡವು ಇದಾಗಿದ್ದು, ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕರು ಕಟ್ಟಡದಡಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸಂಪೂರ್ಣ ಕಟ್ಟಡವೇ ಧರೆಗುರುಳಿದೆ.
ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ. ಮಧ್ಯಾಹ್ನ ಸುಮಾರು 4 ಗಂಟೆ ಹೊತ್ತಿಗೆ ಅವಗಢ ಸಂಭವಿಸಿದೆ.
ಧಾರವಾಡದ ಕೆವಿಜಿ ಬ್ಯಾಂಕ್ ಬಳಿ ಇರುವ ಕಾಂಪ್ಲೆಕ್ಸ್ ಇದಾಗಿದೆ. ಗಾಯಾಳುಗಳನ್ನು ಬಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಸ್ಥಳಕ್ಕೆ ರಕ್ಷಣಾ ಪಡೆಗಳು ಧಾವಿಸಿವೆ.
ಕಳಪೆ ಕಾಮಗಾರಿಯಿಂದಾಗಿ ಕಟ್ಟಡ ಕುಸಿದಿರುವ ಸಾಧ್ಯತೆ, ಜೆಸಿಬಿಯಿಂದ ಅವಶೇಷಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಏಕಾ ಏಕಿ ಒಂದು ಅಂತಸ್ತು ಕುಸಿದು ಬಿತ್ತು ಅದರಿಂದ ಇಡೀ ಕಟ್ಟಡವೇ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.
ಪ್ರತ್ಯಕ್ಷ ದರ್ಶಿಗಳು ಹೇಳುವ ಪ್ರಕಾರ ಅವಶೇಷಗಳಡಿ 150ಕ್ಕೂ ಹೆಚ್ಚು ಮಂದಿ ಸಿಲುಕಿದ್ದಾರೆ.