ಬೆಳಕೆ ಸರ್ಕಾರಿ ಪ್ರೌಢಶಾಲೆಯಲ್ಲಿ ಎಪಿಜೆ ಕಲಾಂ ಪ್ರಯೋಗಾಲಯ ಲೋಕಾರ್ಪಣೆ
Source: sonews |
By Staff Correspondent |
Published on 24th July 2018, 7:08 PM |
Coastal News |
Don't Miss |
ಭಟ್ಕಳ: ಸಿಂಡಿಕೇಟ್ ಬ್ಯಾಂಕ್ ನ ಮಾಜಿ ವ್ಯವಸ್ಥಾಪಕ ಕುಂದಾಪುರ ನಿವಾಸಿಯಾದ ಕೆ.ಸದಾಶಿವ ಆಚಾರ್ಯ ಮತ್ತು ಅವರ ಪತ್ನಿ ಶ್ರೀಮತಿ ಶಶಿಕಲಾ ಎಸ್. ಹೆಗಡೆ ಯವರ ನೀಡಿದ ದೇಣಿಗೆಯಿಂದ ಬೆಳಕೆ ಸರ್ಕಾರಿ ಪ್ರೌಢಶಾಲೆಯಲ್ಲಿ ಸುಸಜ್ಜಿತವಾಗಿ ನಿರ್ಮಿಸಲ್ಪಟ್ಟ ಎ.ಪಿ.ಜೆ.ಅಬ್ದುಲ್ ಕಲಾಂ ವಿಜ್ಞಾನ ಪ್ರಯೋಗಾಲಯವನ್ನು ಶಾಸಕ ಸುನಿಲ್ ನಾಯ್ಕ ಬುಧವಾರ ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜಿ, ಡಯಟ್ ಉಪನ್ಯಾಸಕ ದೇವಿದಾಸ್ ಮೊಗೇರ್, ಪ್ರಯೋಗಾಲಯದ ದಾನಿಗಳಾದ ಕೆ.ಸದಾಶಿವ ಆಚಾರ್ಯ ಮತ್ತು ಅವರ ಪತ್ನಿ ಶ್ರೀಮತಿ ಶಶಿಕಲಾ ಎಸ್. ಹೆಗಡೆ, ಮುಖ್ಯಾಧ್ಯಾಪಕ ಚಂದ್ರಕಾಂತ ಜಿ. ಗಾಂವಕರ ವಿಜ್ಞಾನ ಶಿಕ್ಷಕ ಮಂಜುನಾಥ ಎಮ್ ನಾಯ್ಕ, ಪ್ರಕಾಶ್ ಶಿರಾಲಿ ಹಾಗೂ ಉರಿನ ಗಣ್ಯರು ಉಪಸ್ಥಿತರಿದ್ದರು.