ಉಡುಪಿ ಬಳಿ ಅಂಬ್ಯುಲನ್ಸ್ ಅಪಘಾತ; ಉ.ಕ.ಜಿಲ್ಲೆಯ ಮೂವರ ದಾರುಣ ಸಾವು
ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಕಾರವಾರದಿಂದ ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಗೆ ಸಾಗುತ್ತಿದ್ದ ಅಂಬ್ಯುಲೆನ್ಸ್ ಅಫಘಾತಕ್ಕೀಡಾದ ಕಾರಣ ಅದರಲ್ಲಿದ್ದ ಮೂವರು ದಾರುಣವಾಗಿ ಮೃತ ಪಟ್ಟಿದ್ದಾರೆ.
ಕೋಟಾ ಮಣೂರು ಬಳಿ ಅಫಘಾತ ಸಂಭವಿಸಿದ್ದು ಮೃತರನ್ನು ಶೈಲೇಶ್(39), ಅಶೋಕ್(37) ಮತ್ತು ಉಲ್ಲಾಸ್ (48) ಎಂದು ತಿಳಿದು ಬಂದಿದೆ.
ಕಾರವಾರದ ಮದರ್ ತೆರೆಸಾ ಆಸ್ಪತ್ರೆಯಿಂದ ರೋಗಿಯನ್ನು ಕೆ.ಎಮ್.ಸಿ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭ ಈ ದುರ್ಘಟನೆ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ವಿಭಜಕವನ್ನು ಮೀರಿ ಇನ್ನೊಂದು ಕಡೆಯಿಂದ ಬರುತ್ತಿದ್ದ ಟ್ಯಾಂಕರ್ ಗೆ ಡಿಕ್ಕಿ ಹೊಡೆದಿದೆ.ಅದೃಷ್ಟವಶಾತ್ ಚಾಲಕ ಈ ಅಫಘಾತದಿಂದ ಬದುಕುಳಿದಿದ್ದಾನೆ. ಈ ಬಗ್ಗೆ ಕೋಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.