ಹುಬ್ಬಳ್ಳಿ: ಮಹಾದಾಯಿ ನೀರು ಹಂಚಿಕೆ ವಿವಾದ, ಬಿಎಸ್ ವೈ ಪ್ರಧಾನಮಂತ್ರಿಗಳನ್ನ ಭೇಟಿ ಮಾಡಿ ಮನವರಿಕೆ ಮಾಡಲಿ ಎಂದು ಮಹಾದಾಯಿ, ಕಳಸಾ-ಬಂಡೂರಿ ಹೋರಾಟ ಸಮನ್ವಯ ಸಮಿತಿ ಸದಸ್ಯ ಮಹೇಶ ಪತ್ತಾರ ಹುಬ್ಬಳ್ಳಿಯಲ್ಲಿ ಒತ್ತಾಯ ಮಾಡಿದರು.
ಅವರು ಹುಬ್ಬಳ್ಳಿಯಲ್ಲಿಂದು ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು.
ಗೋವಾ ಮುಖ್ಯಮಂತ್ರಿಗಳು ಅಲ್ಲಿಯ ವಿಧಾನಸಭೆಯಲ್ಲಿ ಮಹಾದಾಯಿ ವಿವಾದಕ್ಕೆ ಪರಿಹಾರ ಸಾದ್ಯವಿಲ್ಲ ಎಂದು ಹೇಳಿದ್ದಾರೆ ಅದು ಸರಿಯಲ್ಲ. ಯಡಿಯೂರಪ್ಪನವರು ಪ್ರಧಾನಿಯವರಿಗೆ ಮನವರಿಕೆ ಮಾಡಿ ಮಾತುಕತೆಗಳ ಮುಖಾಂತರ ಸಮಸ್ಯೆ ಬಗೆಹರಿಸಿಕೊಳ್ಳಬೇಕು.ಗೋವಾ ಮುಖ್ಯಮಂತ್ರಿಗಳು ಆರೋಪ ಮಾಡಿದರು ರಾಜ್ಯದ ಬಿಜೆಪಿ ನಾಯಕರು ಸುಮ್ಮನಿರುವುದು ಏಕೆ ಎಂದು ಪ್ರಶ್ನಿಸಿದ ಅವರು, ಬಿಜೆಪಿ ರಾಷ್ಟ್ರೀಯ ಪಕ್ಷ ಜಲವಿವಾದ ಕುರಿತು ಒಂದು ರಾಷ್ಟ್ರೀಯ ನೀತಿ ಇಲ್ಲ. ನೀರಿನ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು. ಮುಂದಿನ ದಿನಗಳಲ್ಲಿ ಹೋರಾಟ ಹೊಸ ಸ್ವರೂಪ ಪಡೆದುಕೊಳ್ಳುತ್ತದೆ. ಹೋರಾಟದಲ್ಲಿ ಏನೇ ಸಮಸ್ಯೆ ಆದರೆ ಅದಕ್ಕೆ ಕೇಂದ್ರ ಸರ್ಕಾರ ಹೊಣೆ ಯಾಗುತ್ತದೆ ಎಂದು ಎಚ್ಚರಿಸಿದರು.