ಯಲ್ಲಾಪುರ : ಜಿಂಕೆ ಮಾಂಸ ಸಾಗಾಟ ಮಾಡುತ್ತಿದ್ದ ಇಬ್ಬರು ಯುವಕರನ್ನ ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.
ಪಟ್ಟಣದ ಜೋಡುಕೆರೆ ಬಳಿ ಬಂಧಿಸಲಾಗಿದೆ. ಘಟನೆಯಲ್ಲಿ ಜಿಂಕೆ ಮಾಂಸ ಹಾಗೂ ಆಯುಧಗಳು ವಶಕ್ಕೆ ಪಡೆಯಲಾಗಿದೆ. ಮನ್ಸೂರ್ ಅಹ್ಮದ್ ಸತ್ತಾರ್ ಸಾಬ್, ಮೌಲಾಲಿ ಬಾಬಾ ಸಾಬ್ ಬೆಂಗೆಡಿ ಕಲಘಟಗಿ ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ತಳ್ಳಿಗೆರೆ ನಿವಾಸಿ ತಿಮ್ಮಣ್ಣ ಗೌಡ ಎಂಬಾತ ಪರಾರಿಯಾಗಿದ್ದಾನೆ.
ಆರೋಪಿತರಿಂದ ಸುಮಾರು
20ಕೆಜಿಗೂ ಅಧಿಕ ಜಿಂಕೆ ಮಾಂಸವನ್ನ ವಶಪಡಿಸಿಕೊಳ್ಳಲಾಗಿದೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ