ಅಹ್ಮದಾಬಾದ್: ಪೌರತ್ವ ತಿದ್ದುಪಡಿ ಕಾಯ್ದೆಯನ್ವಯ ಪಾಕಿಸ್ತಾನದ ಏಳು ಮಂದಿ ವಲಸಿಗರಿಗೆ ಭಾರತೀಯ ಪೌರತ್ವ ಪ್ರಮಾಣಪತ್ರವನ್ನು ಕಛ್ ನಲ್ಲಿ ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ವಿತರಿಸಿದ್ದಾರೆ.
ಭಾರತೀಯ ಪೌರತ್ವ ಪಡೆದವರಲ್ಲೊಬ್ಬರಾಗಿರುವ ಮೆಹ್ತಾಬ್ ಸಿಂಗ್ ಅಲ್ಲಿ ಧರ್ಮಾಧರಿತ ದೌರ್ಜನ್ಯವನ್ನು ಸಹಿಸಲಾಗದೆ ಭಾರತಕ್ಕೆ 2007ರಲ್ಲಿ ಬಂದವರು.
"ಪಾಕಿಸ್ತಾನವನ್ನು 2007ರಲ್ಲಿ ತೊರೆದು ಬಂದೆ. ಅಲ್ಲಿ ದೇವಸ್ಥಾನಗಳನ್ನು ನಾಶಪಡಿಸಲಾಗುತ್ತದೆ. ಹಿಂದು ಮಹಿಳೆಯರು ಹಾಗೂ ಹುಡುಗಿಯರನ್ನು ಅಪಹರಿಸಿ ಅವರ ಮೇಲೆ ದೌರ್ಜನ್ಯ ನಡೆಸಲಾಗುತ್ತದೆ" ಎಂದು ಅವರು ಹೇಳಿದ್ದಾರೆ.
"ಇದೀಗ ಭಾರತೀಯ ಪೌರತ್ವ ಪಡೆದಿರುವುದು ತುಂಬಾ ಸಂತಸ ನೀಡಿದೆ. ಇದು ನಮಗೆ ದೀಪಾವಳಿಯಂತೆ" ಎಂದು ಅವರು ಹೇಳಿದರು.
"ಪಾಕಿಸ್ತಾನದಲ್ಲಿ ಧಾರ್ಮಿಕ ದೌರ್ಜನ್ಯ ಸಹಿಸಲು ಸಾಧ್ಯವಾಗದೆ ಅಲ್ಲಿಂದ ಓಡಿ ಬಂದ ಸಾವಿರಾರು ಮಂದಿ ವಲಸಿಗರು ಗುಜರಾತ್ ನಲ್ಲಿದ್ದಾರೆ. ಪೌರತ್ವ ತಿದ್ದುಪಡಿ ಕಾಯಿದೆ 2019ರ ಅನ್ವಯ ಅವರಿಗೆ ಭಾರತೀಯ ಪೌರತ್ವ ದೊರೆಯುತ್ತಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ನಾನು ಆಭಾರಿ'' ಎಂದು ಸಚಿವ ಮಾಂಡವಿಯಾ ಹೇಳಿದರು.