ಶಿರಸಿ : ನಗರದ ಕೆ.ಎಚ್.ಬಿ ಕಾಲೋನಿ ಹೊಸ ಬಡಾವಣೆಯ ಸಾರ್ವಜನಿಕ ರಸ್ತೆಯಲ್ಲಿ ಗಾಂಜಾ ಮಾದಕ ವಸ್ತುವನ್ನು ಅಕ್ರಮವಾಗಿ ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದ ಮೂವರನ್ನ ಪೊಲೀಸರು ಬಂಧಿಸಿದ್ದಾರೆ.
ಮಂಜುನಾಥ ತಂದೆ ಗೋಪಾಲ ಪಾಠಣಕರ (27) ಅಯ್ಯಪ್ಪನಗರ, ಶಿರಸಿ, ಹರೀಶ ತಂದೆ ಮಂಜುನಾಥ ನಾಯ್ಕ (26) ಶಿರಸಿ ಮತ್ತು ವಿರೇಶ ಶನಿಯಾ ಶಿರ್ಶಿಕರ (21) ರಾಜೀವನಗರ, ಶಿರಸಿ ಬಂಧಿತರು.
ಇವರು ಶಿರಸಿ ಕೆ.ಎಚ್.ಬಿ ಕಾಲೋನಿ ಹೊಸ ಬಡಾವಣೆಯ ಸಾರ್ವಜನಿಕ ರಸ್ತೆಯಲ್ಲಿ ಗಾಂಜಾ ಮಾದಕ ವಸ್ತುವನ್ನು ಅಕ್ರಮವಾಗಿ ಸಾಗಾಟ ಮತ್ತು ಮಾರಾಟ ಮಾಡುತ್ತಿರುವ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜ, ಅಡಿಷನಲ್ ಎಸ್ಪಿ ಬದರಿನಾಥ, ಶಿರಸಿ ಡಿವೈಎಸ್ಪಿ ರವಿ ಡಿ ನಾಯ್ಕ ಅವರ ಮಾರ್ಗದರ್ಶನದಲ್ಲಿ ಸಿಪಿಐ ರಾಮಚಂದ್ರ ನಾಯಕ ದಾಳಿ ಮಾಡಿ ಆರೋಪಿತರನ್ ಬಂಧಿಸಿದ್ದಾರೆ. ಬಂಧಿತರಿಂದ 228 ಗ್ರಾಂ ತೂಕದ ಗಾಂಜಾ ಮಾದಕ ವಸ್ತು ಮತ್ತು ಹೊಂಡಾ ಆಕ್ಟಿವಾ ಮೋಟಾರ ಸೈಕಲ್ ಹಾಗೂ 1250 ರೂಪಾಯಿ, ಮೂರು ಮೊಬೈಲ್ ಫೋನ್ ಗಳನ್ನು ಜಪ್ತಿ ಪಡಿಸಿಕೊಂಡಿದ್ದಾರೆ. ಶಿರಸಿ ಹೊಸ ಮಾರುಕಟ್ಟೆ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾರ್ಯಚರಣೆಯಲ್ಲಿ ಶಿರಸಿ ಹೊಸ ಮಾರುಕಟ್ಟೆ ಪೊಲೀಸ ಠಾಣೆಯ ಪಿಎಸ್ಐ ಭೀಮಾಶಂಕರ ಸಿನ್ನೂರ ಸಂಗಣ್ಣ, ಶ್ರೀಮತಿ ಜಯಶ್ರೀ ಶಾನಭಾಗ ಹಾಗೂ ಸಿಬ್ಬಂದಿಗಳಾದ ಮೊಹಮ್ಮದ ಇಸ್ಮಾಯಿಲ್ ಕೋಣನಕೇರಿ, ರಾಮಯ್ಯ ಪೂಜಾರಿ, ಹನುಮಂತ ಮಾಕಾಪುರ, ಮೋಹನ ನಾಯ್ಕ, ಪಾಂಡುರಂಗ ನಾಗೋಜಿ ಭಾಗವಹಿಸಿದ್ದರು.