ಚಿನ್ನದ ವ್ಯಾಪಾರಿಯ 500ಗ್ರಾಂ ಚಿನ್ನ ಹಾಗೂ 5ಲ.ರೂ ನಗದು ಕಳುವು

Source: sonews | By Staff Correspondent | Published on 14th March 2018, 6:36 PM | Coastal News | Don't Miss |

ಹೃದಯಘಾತಕ್ಕೊಳಗಾಗಿ ಆಸ್ಪತ್ರೆ ಸೇರಿದ ವ್ಯಾಪಾರಿ

ಭಟ್ಕಳ: ವ್ಯಾಪಾರವನ್ನು ಮುಗಿಸಿ ಅಂಗಡಿಯಲ್ಲಿದ್ದ 500ಗ್ರಾಂ ಚಿನ್ನ ಹಾಗೂ ನಗದು 5ಲಕ್ಷ ರೂಗಳನ್ನು ಬೈಕ್ ನ ಬಾಕ್ಸ್ ನಲ್ಲಿಟ್ಟು ಅಂಗಡಿಯ ಷಟರ್ ಹಾಕಿ ಬರುವಷ್ಟರಲ್ಲಿ ಕಳ್ಳರು ಚಿನ್ನ ಹಾಗೂ ನಗದನ್ನು ಅಪಹರಿಸಿದ್ದು ಇದನ್ನು ಕಂಡು ಅಘಾತಕ್ಕೊಳಗಾದ ವ್ಯಾಪಾರಿ ಲಘುಹೃದಯಘಾತಕ್ಕೊಳಗಾಗಿ ಆಸ್ಪತ್ರೆ ಸೇರಿದ ಘಟನೆ ಮಂಗಳವಾರ ರಾತ್ರಿ ಹಳೆ ಬಸ್ ನಿಲ್ದಾಣದ ಬಳಿಯ ಶ್ರೀವಿಮಲೇಶ್ವರ ಜ್ಯುವೆಲ್ಲರಿಯಲ್ಲಿ ನಡೆದಿದೆ.  

ಅಘಾತಕ್ಕೊಳಗಾದ ಜ್ಯುವೆಲ್ಲರಿ ಅಂಗಡಿಯ ಮಾಲಿಕ ಉದಯ ಕೇಶವ ಶೇಟ್ ಎಂದು ಗುರುತಿಸಲಾಗಿದ್ದು ಇವರನ್ನು ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಘಟನೆಯ ಕುರಿತಂತೆ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

ಘಟನಯ ವಿವರ: ಉದಯ ಕೇಶವ ಶೇಟ್ ಎಂಬುವವರಿಗೆ ಸೇರಿದ ಶ್ರೀವಿಮಲೇಶ್ವರ ಜ್ಯುವೆಲ್ಲರಿ ವಕ್ರ್ಸ್ ನಲ್ಲಿ ಎಂದಿನಂತೆ ರಾತ್ರಿ 9ಗಂಟೆಗೆ ವ್ಯಾಪಾರವನ್ನು ಮುಗಿಸಿ ಅಂಗಡಿಯಲ್ಲಿದ್ದ 500ಗ್ರಾಂ ಚಿನ್ನಾಭರಣ ಹಾಗೂ 5ಲಕ್ಷ ರೂ ನಗದನ್ನು ಬ್ಯಾಗಿನಲ್ಲಿ ಹಾಕಿ ತನ್ನ ಸ್ಕೂಟಿಯ ಹಿಂಬದಿ ಸೀಟ್ ನಲ್ಲಿರುವ ಬಾಕ್ಸ್ ನಲ್ಲಿಟ್ಟು ಅಂಗಡಿಯ ಷಟರ್ ಹಾಕಲು ಹೋಗಿದ್ದಾರೆ. ಷಟರ್ ಹಾಕಿ ಬಂದು ನೋಡುವಷ್ಟರಲ್ಲಿ ಹಣ ಹಾಗೂ ಚಿನ್ನವಿದ್ದ ಬ್ಯಾಗ್ ನಾಪತ್ತೆಯಾಗಿದೆ. ಇದನ್ನು ಅಘಾತಕ್ಕೊಳಗಾದ ಉದಯ ಶೇಟ್ ಲಘುಹೃದಯಘಾತವುಂಟಾಗಿ ಮೂರ್ಚೆ ಹೋಗಿ ಕೆಳಗೆ ಬಿದ್ದಿದ್ದಾರೆ ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದು ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.  

Read These Next

ಕುಂದಾಪುರ: ತಾಯಿಯ ಕೊಳೆತ ಮೃತದೇಹದೊಂದಿಗೆ 3 ದಿನ ಕಳೆದ ವಿಕಲಚೇತನ ಮಗಳು – ಆಸ್ಪತ್ರೆಯಲ್ಲಿ ನಿಧನ

ಮನೆಯಲ್ಲೇ ಮೃತಪಟ್ಟು ಕೊಳೆತ ಸ್ಥಿತಿಯಲ್ಲಿದ್ದ ತಾಯಿಯ ಮೃತದೇಹದ ಜೊತೆ ಅನ್ನಾಹಾರ ಇಲ್ಲದೇ ಮೂರು ನಾಲ್ಕು ದಿನ ಕಳೆದ 32ರ ಹರೆಯದ ...

ರಸ್ತೆಯಲ್ಲಿ ಕಸ ಎಸೆಯುವುದನ್ನು ತಪ್ಪಿಸಲು ಹೆಬಳೆ ಪಂಚಾಯತ್ ವ್ಯಾಪ್ತಿಯಲ್ಲಿ ಸಿಸಿಟಿವಿ ಕ್ಯಾಮರಾ ಕಣ್ಗಾವಲು

ಸ್ಥಳೀಯ ಜನರ ಸಹಕಾರದಿಂದ ಹನೀಫಾಬಾದ್ ರಸ್ತೆಯಲ್ಲಿ ಮೂರು, ಜಾಮಿಯಾಬಾದ್ ರಸ್ತೆಯಲ್ಲಿ ಮೂರು, ಮಿನಾ ರಸ್ತೆಯಲ್ಲಿ ಒಂದು ಕ್ಯಾಮೆರಾ ...

ರಾಷ್ಟಿಯ ಹೆದ್ದಾರಿ ಕಾಮಗಾರಿಗಳನ್ನು ನಿಗದಿತ ಯೋಜನೆಯಂತೆ ಪೂರ್ಣಗೊಳಿಸಿ - ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಕಾರವಾರ : ಜಿಲ್ಲೆಯಲ್ಲಿ ಹಾದು ಹೋಗಿರುವ ಚತುಷ್ಪತ ರಾಷ್ಟಿಯ ಹೆದ್ದಾರಿಯ ಕಾಮಗಾರಿಯಲ್ಲಿ , ಉದ್ದೇಶಿತ ಯೋಜನೆಯಲ್ಲಿ ತಿಳಿಸಿರುವ ಎಲ್ಲಾ ...