ಭಟ್ಕಳ: ಈ 21 ದಿನಗಳ ಬಂದ್ ಸಮಯದಲ್ಲಿ ಎಲ್ಲಿಯೂ ಹೊಟೇಲ್ಗಳಾಗಿ ಕುಡಿಯಲು ನೀರು ಸಹ ಸಿಗದ ಪರಿಸ್ಥಿತಿ ನಿರ್ಮಾಣಗೊಂಡಿದ್ದು ಮನೆಮಠ ಇದ್ದರು ತಮ್ಮ ತಮ್ಮ ಮನೆಗಳಲ್ಲಿದ್ದಕೊಂಡು ಹೆಂಡತಿ ಮಕ್ಕಳೊಂದಿಗೆ ಹಾಯಾಗಿದ್ದಾರೆ.
ರಸ್ತೆ ಬದಿ ಭಿಕ್ಷೆ ಬೇಡಿ, ಹೋಟೆಲ್ ನಲ್ಲಿ ಉಂಡು ದೇವಸ್ಥಾನ, ಮಸೀದಿ ಬಸ್ ನಿಲ್ದಾಣದ ಎದರು ರಾತ್ರಿ ಕಳೆಯುವ ನಿರ್ಗತಿಕರ ಸ್ಥಿತಿ ಚಿಂತಾಜನಕವಾಗುತ್ತಿದ್ದು ಯಾರಾದರೂ ತಿನ್ನಲು ಕೊಟ್ಟು ಹೋಗುವರೇ ಎಂಬ ಆಸೆಗಣ್ಣಿನಿಂದ ರಸ್ತೆಯನ್ನೇ ನೋಡುತ್ತ ಕುಳಿತ್ತಿರುತ್ತಾರೆ. ಇಂತಹ ಸನ್ನಿವೇಶದಲ್ಲಿ ಭಟ್ಕಳದ ಉರಿಬಿಸಿಲಿನಲ್ಲಿ ಕರ್ತವ್ಯ ನಿರತ ಪೊಲೀಸರು ತಮ್ಮ ಕರ್ತವ್ಯದ ನಡುವೆಯೂ ಮಾನವೀಯತೆಯನ್ನು ಮರೆದು ರಸ್ತೆ ಬದಿ ಭಿಕ್ಷೆ ಬೇಡಿ ಬದುಕುತ್ತಿರುವವರಿಗೆ ಆಸರೆಯಾಗಿ ತಮ್ಮ ಪಾಲಿನ ಅನ್ನ ನೀರಿನಲ್ಲಿ ಅವರಿಗೊಂದಿಷ್ಟು ಪಾಲು ನೀಡಿ ಅವರ ಬದುಕಿಗೆ ಆಸರೆಯಾಗಿದ್ದಾರೆ.
ಯಾವಾಗಲೂ ಪೊಲೀಸರೆಂದರೆ ಸಿಡುಕು ಸ್ವಭಾವದವರು, ಅವರಲ್ಲಿ ಮಾವನೀಯತೆ ಎಂಬುದಿಲ್ಲ ಎನ್ನುವ ಮಂದಿಗೆ ಪೊಲೀಸರು ಕೂಡ ಮನುಷ್ಯರು, ನಮ್ಮಲ್ಲಿಯೂ ಕೂಡ ಮಾನವೀಯತೆ ಹೃದಯವಿದೆ ಎಂದು ತೋರಿಸಿಕೊಟ್ಟಿರುವ ಇಲ್ಲಿನ ಪೂಲೀಸರು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.