ಜಾತಿ ಗಣತಿಯನ್ನು ಜನಗಣತಿಯೊಂದಿಗೆ ಸಂಯೋಜಿಸಿ ಪ್ರಧಾನಿಗೆ ಸಿಎಂ ಸ್ಟಾಲಿನ್ ಮನವಿ

Source: Vb | By I.G. Bhatkali | Published on 22nd October 2023, 8:04 AM | National News |

ಚೆನೈ: ಮುಂಬರುವ ಜನಗಣತಿಯೊ೦ದಿಗೆ ಜಾತಿ ಗಣತಿಯನ್ನು ಸಂಯೋಜಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ.

ಈ ನಿರ್ಣಾಯಕ ಜಾತಿ ಗಣತಿಯ ಫಲಿತಾಂಶ ದೇಶದ ಕೋಟ್ಯಂತರ ಅರ್ಹ ಜನರ ಬದುಕಿಗೆ ನೆರವಾಗಲಿದೆ. ಇದು ಇನ್ನಷ್ಟು ವಿಳಂಬ ಆಗಬಾರದು ಎಂದು ಅವರು ಹೇಳಿದ್ದಾರೆ.

ಅಕ್ಟೋಬರ್ 20ರಂದು ಪ್ರಧಾನಿ ಅವರಿಗೆ ಬರೆದಿರುವ ಪತ್ರದಲ್ಲಿ ಸ್ಟಾಲಿನ್, “ಈ ಜಾತಿ ಗಣತಿಯು ಅಭಿವೃದ್ಧಿಯ ಲಾಭವನ್ನು ಅತ್ಯಂತ ದುರ್ಬಲ ವರ್ಗಗಳಿಗೆ ತಲುಪಿಸುವಲ್ಲಿ ಹಾಗೂ ಹೆಚ್ಚು ಬಲಿಷ್ಠ, ಎಲ್ಲರನ್ನೂ ಒಳಗೊಂಡ ಭಾರತವನ್ನು ನಿರ್ಮಾಣ ಮಾಡುವಲ್ಲಿ ಸ್ಮರಣೀಯ ಹೆಜ್ಜೆಯಾಗಬಹುದು ಎಂಬುದರಲ್ಲಿ ನನಗೆ ಯಾವುದೇ ಸಂದೇಹ ಇಲ್ಲ' ಎಂದಿದ್ದಾರೆ.

ಬಿಹಾರದಂತಹ ಕೆಲವು ರಾಜ್ಯಗಳಲ್ಲಿ ಸರಕಾರಗಳು ಜಾತಿ ಜನಗಣತಿ ನಡೆಸಿವೆ. ಇನ್ನು ಕೆಲವು ರಾಜ್ಯಗಳು ಜಾತಿಗಣತಿ ನಡೆಸುವುದಾಗಿ ಘೋಷಿಸಿವೆ. ಈ ನಿರ್ದಿಷ್ಟ ರಾಜ್ಯಗಳ ಜಾತಿಗಣತಿ, ಅದರ ದತ್ತಾಂಶದ ಫಲಿತಾಂಶಗಳು ಸಮಾಜ ಹಾಗೂ ಅದರ ಅಗತ್ಯತೆಗಳನ್ನು ಪೂರೈಸುವಲ್ಲಿ ತುಂಬಾ ಉಪಯುಕ್ತ ಒಳನೋಟಗಳನ್ನು ನೀಡಲಿವೆ. ಆದರೆ ಇದು ರಾಷ್ಟ್ರ ವ್ಯಾಪಿ ದತ್ತಾಂಶದ ತುಲನೆ ಹಾಗೂ ಪರಿಷ್ಕರಣೆಯಲ್ಲಿ ಕೊರತೆಯನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.

ಪ್ರಸ್ತಾವಿತ ಜನಗಣತಿಯೊಂದಿಗೆ ಜಾತಿ ಗಣತಿಯನ್ನು ಸಂಯೋಜಿಸಿದರೆ ಮಾತ್ರವೇ ಸಮಾಜದ ಜಾತಿ ಸಂಯೋಜನೆ ಹಾಗೂ ಸಾಮಾಜಿಕ-ಆರ್ಥಿಕತೆಯ ಸೂಚಕದ ಮೇಲೆ ಅದರ ಪ್ರತಿಫಲನದ ಬಗ್ಗೆ ಸಮಗ್ರ ಹಾಗೂ ವಿಶ್ವಾಸಾರ್ಹ ದತ್ತಾಂಶವನ್ನು ದೊರಕಬಹುದು ಎಂದು ಅವರು ಹೇಳಿದರು. ಕಳೆದ 90 ವರ್ಷಗಳಲ್ಲಿ ದೇಶದ ಜನಸಂಖ್ಯೆ ಹಾಗೂ ಸಾಮಾಜಿಕ-ಆರ್ಥಿಕ ಪರಿಸ್ಥಿತಿ ಅನೇಕ ಬದಲಾವಣೆಗೆ ಒಳಗಾಗಿವೆ. ಆದರೆ, ಹಲವು ನೀತಿಗಳ ಹೊರತಾಗಿಯೂ ಸಮಾಜದ ದುರ್ಬಲ ವರ್ಗ ಈಗಲೂ ಹಿಂದುಳಿದಿದೆ ಎಂದು ಸ್ಟಾಲಿನ್ ಅವರು ಪತ್ರದಲ್ಲಿ ಹೇಳಿದ್ದಾರೆ.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...