ಮೃತ ಕಾರ್ಮಿಕರ ಕುಟುಂಬಕ್ಕೆ ಪರಿಹಾರ ಮೊತ್ತ 30 ಲಕ್ಷ ರೂ.ಗೆ ಹೆಚ್ಚಳ; ಸುಪ್ರೀಂ ಕೋರ್ಟ್ ನಿರ್ದೇಶನ

Source: Vb | By I.G. Bhatkali | Published on 21st October 2023, 8:00 AM | National News |

ಹೊಸದಿಲ್ಲಿ: ಮ್ಯಾನ್ಯುವಲ್ ಸ್ಕ್ಯಾವೆಂಜಿರ ಪದ್ಧತಿಯ ನಿರ್ಮೂಲನ ವನ್ನು ಖಚಿತ ಪಡಿಸುವಂತೆ ಶುಕ್ರವಾರ ಕೇಂದ್ರ, ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿರುವ ಸರ್ವೋಚ್ಚ ನ್ಯಾಯಾಲಯವು, ಮಲಗುಂಡಿಗಳು ಮತ್ತು ಒಳಚರಂಡಿಗಳ ಸ್ವಚ್ಛತೆ ವೇಳೆ ಸಾವನ್ನಪ್ಪುವ ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ಮೊತ್ತವನ್ನು 10 ಲಕ್ಷ ರೂ.ಗಳಿಂದ 30 ಲಕ್ಷ ರೂ. ಗಳಿಗೆ ಹೆಚ್ಚಿಸಿದೆ.

ಮ್ಯಾನ್ಯುವಲ್ ಸ್ಕ್ಯಾವೆಂಜಿರಗಳಾಗಿ ಉದ್ಯೋಗ ನಿಷೇಧ ಮತ್ತು ಅವರ ಪುನರ್ವಸತಿ ಕಾಯ್ದೆ, 2013ರಡಿ ಮಲಗುಂಡಿಗಳನ್ನು ಕೈಗಳಿಂದ ಸ್ವಚ್ಛ ಗೊಳಿಸುವುದನ್ನು ನಿಷೇಧಿಸಲಾಗಿದೆಯಾ ದರೂ, ದೇಶದ ಹಲವಾರು ಭಾಗಗಳಲ್ಲಿ ಈ ಅನಿಷ್ಟ ಪದ್ಧತಿ ಇನ್ನೂ ಅಸ್ತಿತ್ವದಲ್ಲಿದೆ.

ಶುಕ್ರವಾರ ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಪದ್ಧತಿ ವಿರುದ್ಧ ಸಲ್ಲಿಸಲಾದ ಅರ್ಜಿಯ ವಿಚಾ ರಣೆ ಸಂದರ್ಭದಲ್ಲಿ ಮೂವರು ನ್ಯಾಯಾಧೀ ಶರ ಪೀಠವು ಈ ನಿರ್ದೇಶನಗಳನ್ನು ಹೊರ ಡಿಸಿತು. ಮಲಗುಂಡಿಗಳು ಮತ್ತು ಒಳಚರಂಡಿ ಗಳ ಸ್ವಚ್ಛತೆ ಸಂದರ್ಭದಲ್ಲಿ ಶಾಶ್ವತ ಅಂಗವೈಕಲ್ಯ ಕ್ಕಾಗಿ ಕನಿಷ್ಠ 20 ಲ.ರೂ.ಗಳನ್ನು ಮತ್ತು ಕಾರ್ಮಿಕರಿಗೆ ಇತರ ಅಂಗವೈಕಲ್ಯಗಳುಂಟಾ ದರೆ ಕನಿಷ್ಠ 20 ಲ.ರೂ.ಗಳ ಪರಿಹಾರವನ್ನು ಪಾವತಿಸಬೇಕು ಎಂದು ಅದು ಹೇಳಿತು.

1993ರ ನಂತರ ಮಲಗುಂಡಿಗಳು ಅಥವಾ ಒಳಚರಂಡಿಗಳನ್ನು ಸ್ವಚ್ಛ ಮಾಡುವಾಗ ಸಾವನ್ನಪ್ಪಿದ ಕಾರ್ಮಿಕರ ಕುಟುಂಬಗಳಿಗೆ 10 ಲ.ರೂ.ಗಳ ಪರಿಹಾರವನ್ನು ಪಾವತಿಸುವಂತೆ ಸುಪ್ರೀಂ ಕೋರ್ಟ್‌ 2014ರಲ್ಲಿ ಆದೇಶಿಸಿತ್ತು.

ಸಮಾನತೆಯ ಹಕ್ಕನ್ನು ಜಾರಿಗೊಳಿಸು ವುದಕ್ಕೆ ಹಾಗೂ ಅಸ್ಪೃಶ್ಯತೆ ಮತ್ತು ಬಾಲ ಕಾರ್ಮಿಕ ಪದ್ಧತಿಯ ನಿರ್ಮೂಲನಕ್ಕೆ ಸರಕಾರಗಳು ಕರ್ತವ್ಯಬದ್ಧವಾಗಿವೆ ಎಂದು ಶುಕ್ರವಾರ ಹೇಳಿದ ಸರ್ವೋಚ್ಚ ನ್ಯಾಯಾ ಲಯವು, 'ಅಮಾನವೀಯ ಪರಿಸ್ಥಿತಿಗಳಲ್ಲಿ ಇಂತಹ ಅನಿಷ್ಟ ಪದ್ಧತಿಯಲ್ಲಿ ಸಿಕ್ಕಿಕೊಂಡಿರುವ ಗೋಚರಿಸದ ಮತ್ತು ಧ್ವನಿಯನ್ನು ಉಡುಗಿಸಲ್ಪಟ್ಟಿರುವ ಜನಸಂಖ್ಯೆಯ ಈ ದೊಡ್ಡ ಭಾಗಕ್ಕೆ ನಮ್ಮಲ್ಲಿ ಪ್ರತಿಯೊಬ್ಬರೂ ಋಣಿಗಳಾಗಿದ್ದೇವೆ' ಎಂದು ಹೇಳಿತು. ನ್ಯಾಯಾಲಯವುಮುಂದಿನ ವಿಚಾರಣೆಯನ್ನು 2024, ಫೆ.1ಕ್ಕೆ ನಿಗದಿಗೊಳಿಸಿದೆ.

ಸಾವುಗಳ ಕುರಿತು ಕೇಂದ್ರದ ಅಂಕಿಅಂಶಗಳು:
ಮಾರ್ಚ್‌ನಲ್ಲಿ ಕೇಂದ್ರ ಸರಕಾರವು 1993ರಿಂದ ದೇಶಾದ್ಯಂತ ಮಲಗುಂಡಿಗಳು ಮತ್ತು ಒಳಚರಂಡಿಗಳನ್ನು ಸ್ವಚ್ಛ ಮಾಡುವಾಗ 1,035 ಜನರು ಮೃತಪಟ್ಟಿದ್ದಾರೆ. ಸ್ವಚ್ಛತಾ ಕಾರ್ಮಿಕರಿಗೆ ಸುರಕ್ಷತಾ ಸಾಧನಗಳನ್ನು ಒದಗಿಸದ್ದಕ್ಕಾಗಿ ಮ್ಯಾನ್ಯುವಲ್ ಕ್ಯಾವೆಂಜಿಂಗ್ ಕಾಯ್ದೆಯಡಿ 616 ಗುತ್ತಿಗೆದಾರರ ವಿರುದ್ಧ ಪ್ರಕರಣಗಳು ದಾಖಲಾಗಿದ್ದರೂ, ಒಂದು ಪ್ರಕರಣದಲ್ಲಿ ಮಾತ್ರ ದೋಷನಿರ್ಣಯಗೊಂಡಿದೆ ಎಂದು ತಿಳಿಸಿತ್ತು.

ಸ್ವಯಂ ಉದ್ಯೋಗ ಯೋಜನೆಗಾಗಿ ಕುಸಿಯುತ್ತಲೇ ಇರುವ ಅನುದಾನ:
ಕೇಂದ್ರವು 2019-20ರ ಬಜೆಟ್‌ನಲ್ಲಿ ಮ್ಯಾನ್ಯುವಲ್ ಸ್ಟಾವೆಂಜರ್‌ಗಳಿಗಾಗಿ ಸ್ವಯಂ ಉದ್ಯೋಗ ಯೋಜನೆಗಾಗಿ 110 ಕೋ.ರೂ.ಗಳನ್ನು ಹಂಚಿಕೆ ಮಾಡಿತ್ತು, ಆದರೆ ಪರಿಷ್ಕರಣೆಯ ಬಳಿಕ ಈ ಮೊತ್ತವು 99.93 ಕೋ.ರೂ.ಗೆ ಇಳಿದಿತ್ತು. 2020-2021 ಮತ್ತು 2021-22ರ ಬಜೆಟ್‌ಗಳಲ್ಲಿ ಅನುಕ್ರಮವಾಗಿ 110 ಕೋ.ರೂ. ಮತ್ತು 100 ಕೋ.ರೂ. ಗಳನ್ನು ಹಂಚಿಕೆ ಮಾಡಲಾಗಿತ್ತಾದರೂ ಪರಿಷ್ಕರಣೆಯ ಬಳಿಕ 30 ಕೋ.ರೂ.ಮತ್ತು 43.31 ಕೋ.ರೂ.ಗೆ ಇಳಿದಿತ್ತು.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...