ಅಂಕೋಲಾದಲ್ಲಿ ರೈಲಿಗೆ ಬಿದ್ದು ನಿವೃತ್ತ ವಲಯಾರಣ್ಯಧಿಕಾರಿ ಆತ್ಮಹತ್ಯೆ.
ಅಂಕೋಲಾ : ಮಾನಸಿಕವಾಗಿ ನೊಂದು ವ್ಯಕ್ತಿಯೋರ್ವ ರೈಲ್ವೆ ಹಳಿಗೆ ತಲೆ ಕೊಟ್ಟು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಕೋಲಾದ ಹಟ್ಟಿಕೇರಿ ಗ್ರಾಮದ ಬಳಿ ನಡೆದಿದೆ.
ಗಜಾನನ ಶಂಕರ ನಾಯ್ಕ (70) ಮೃತ ದುರ್ದೈವಿ. ಅಂಕೋಲಾದ ಬೇಳಾಬಂದರ ನಿವಾಸಿಯಾದ ಗಜಾನನ ನಿವೃತ್ತ ವಲಯ ಅರಣ್ಯಾಧಿಕಾರಿ ಎಂದು ತಿಳಿದುಬಂದಿದೆ.
ಕಳೆದ ಕೆಲ ದಿನಗಳಿಂದ ಮಾನಸಿಕವಾಗಿ ನೊಂದುಕೊಂಡಿದ್ದ ಈತ ಬುಧವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.