ಅದಾನಿ ಗ್ರೂಪ್‌ನಿಂದ 'ಕೋಲ್‌ಮಾಲ್‌ ಲಾಭದ ಹಣ ವಿದೇಶಕ್ಕೆ; ಕಾಂಗ್ರೆಸ್ ಆರೋಪ

Source: Vb | By I.G. Bhatkali | Published on 15th October 2023, 10:45 PM | National News |

ಹೊಸದಿಲ್ಲಿ: ಆಧುನಿಕ ಭಾರತ ಕಂಡಂತಹ ಅತಿ ದೊಡ್ಡ ಕಲ್ಲಿದ್ದಲು ಹಗರಣದ ಹಿಂದೆ ಅದಾನಿ ಉದ್ಯಮ ಸಮೂಹ ಇದೆಯೆಂದು ಕಾಂಗ್ರೆಸ್ ಶನಿವಾರ ಆಪಾದಿಸಿದೆ. ಕಳೆದ ಎರಡು ವರ್ಷಗಳಲ್ಲಿ ಕಲ್ಲಿದ್ದಲು ಮಾರಾಟದಿಂದ ಬಂದ ಲಾಭಾಂಶದಲ್ಲಿ 12 ಸಾವಿರ ಕೋಟಿ ರೂ. ಗೂ ಅಧಿಕ ಹಣವನ್ನು ದೇಶದಿಂದ ಹೊರಗೆ ವರ್ಗಾಯಿಸಲಾಗಿದೆ ಎಂಬುದನ್ನು ಹೊಸದಾಗಿ ಪ್ರಕಟವಾದ ಪತ್ರಿಕಾ ವರದಿಯೊಂದು ಬಹಿರಂಗ ಪಡಿಸಿರುವುದಾಗಿ ಅದು ಹೇಳಿದೆ. 2019 ಹಾಗೂ 2021ರ ನಡುವೆ ಅದಾನಿ ಕಂಪೆನಿಯು 31 ಲಕ್ಷ ಟನ್ ಕಲ್ಲಿದ್ದಲು ಸಾಗಾಟಗಳನ್ನು ನಡೆಸಿದೆ. ಕಲ್ಲಿದ್ದಲು ವ್ಯವಹಾರದಲ್ಲಿ ಲಾಭಾಂಶ ಕಡಿಮೆಯಿದ್ದರೂ, ಅದಾನಿ ಸಮೂಹವು ಗ್ರಾಹಕರಿಗೆ ದುಬಾರಿ ಬೆಲೆಗೆ ಮಾರಾಟ ಮಾಡುವ ಮೂಲಕ ಅದರಲ್ಲಿ ಶೇ.52ರಷ್ಟು ಲಾಭ ಮಾಡಿಕೊಂಡಿದೆ. ಎಂಬುದನ್ನು ಫೈನಾನ್ಶಿಯಲ್ ಟೈಮ್ಸ್‌ ನಲ್ಲಿ ಪ್ರಕಟವಾದ ವರದಿಯು ಬಹಿರಂಗಪಡಿಸಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ.

ಅದಾನಿ ಕಂಪೆನಿಯು ಕೋಟ್ಯಂತರ ಭಾರತೀಯರ ಜೇಬಿಗೆ ಕನ್ನ ಹಾಕಿದೆ ಎಂಬುದು ಉತ್ತೇಕ್ಷೆಯ ಮಾತಲ್ಲ, ಅಕ್ಷರಶಃ ಸತ್ಯ ಎಂದು ಅವರು ಹೇಳಿದರು.

ಆಸ್ತಿಗಳನ್ನು ಸಂಪಾದಿಸಲು ಅದಾನಿ ಗ್ರೂಪ್‌ಗೆ ಬಿಜೆಪಿ ಸರಕಾರವು ನೆರವಾಗುತ್ತಿದೆ. ಇದರಿಂದಾಗಿ ಬಿಜೆಪಿಗೆ ಚುನಾವಣಾ ಬಾಂಡ್‌ಗಳ ಪ್ರವಾಹವೇ ಹರಿದುಬರುತ್ತಿದ್ದು, ಅದಕ್ಕೆ ಇಷ್ಟಬಂದಂತೆ ಶಾಸಕರನ್ನು ಖರೀದಿಸಲು ಹಾಗೂ ಪ್ರತಿಪಕ್ಷಗಳನ್ನು ಒಡೆಯಲು ಸಾಧ್ಯವಾಗುತ್ತಿದೆ ಎಂದು ಜೈರಾಮ್ ರಮೇಶ್‌ ಆಪಾದಿಸಿದ್ದಾರೆ.

ಇದು ಭಾರತದ ಅತಿ ದೊಡ್ಡ ಹಗರಣವಾಗಿದೆ. ಭಾರತದ ಜನತೆಯ ಬಗ್ಗೆ ಇರುವ ಘೋರ ತಿರಸಾರದ ಜೊತೆ ದುರಾಸೆ ಹಾಗೂ
ಹೃದಯಹೀನತೆಯನ್ನು ಅದು ಹೊಂದಿದೆ ಎಂದು ಹೇಳಿಕೆಯು ತಿಳಿಸಿದೆ.

ನಿಭಾಯಿಸಲು ಸಾಧ್ಯವಾಗದ ಹಗರಣವೇ ಇಲ್ಲ ಹಾಗೂ ಗಮನವನ್ನು ಬೇರೆಡೆ ಸೆಳೆಯಲು ಸಾಧ್ಯವಾಗದ ಯಾವುದೇ ವಿಷಯವಿಲ್ಲವೆಂಬ ಭಾವನೆಯೊಂದಿಗೆ ಈ ಹಗರಣವನ್ನು ನಡೆಸಲಾಗಿದೆ.

ಆದರೆ ಶಾಹೆನ್‌ಶಾ ಅವರು ತಪ್ಪುಮಾಡಿದ್ದಾರೆ. ಭಾರತವನ್ನು ವಶಪಡಿಸಿಕೊಳ್ಳಲು ಮೊದಾನಿ'ಗೆ ಸಾಧ್ಯವಾಗದು. 2024ರಲ್ಲಿ ಭಾರತದ ಜನತೆ ಅವರಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ರಮೇಶ್ ತಿಳಿಸಿದ್ದಾರೆ. ಆದರೆ ಫೈನಾನ್ಶಿಯಲ್ ಟೈಮ್ಸ್‌ನಲ್ಲಿ ಪ್ರಕಟವಾದ ವರದಿಯನ್ನು ಅದಾನಿ ಗ್ರೂಪ್ ಖಂಡಿಸಿದೆ. ಸಾರ್ವಜನಿಕವಾಗಿ ಲಭ್ಯವಿರುವ ವಾಸ್ತವಾಂಶಗಳು ಹಾಗೂ ಮಾಹಿತಿಯನ್ನು ವರದಿಯಲ್ಲಿ ತಿರುಚಲಾಗಿದೆ ಎಂದು ಅದು ಆರೋಪಿಸಿದೆ.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...