ಮಂಗಳೂರು : ಮುಖ್ಯಮಂತ್ರಿ ಪದಕಕ್ಕೆ 2017-18ನೇ ಸಾಲಿನಲ್ಲಿ ಆಯ್ಕೆಯಾದ ಕರಾವಳಿಯ ಪೋಲಿಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ನವೆಂಬರ್ ಇಪ್ಪತ್ತ ರಂದು ಬೆಂಗಳೂರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಬೆಳಿಗ್ಗೆ 9ಗಂಟೆಗೆ ಸಿಎಂ ಬಿಎಸ್ ಯಡಿಯೂರಪ್ಪ ಪದಕ ಪ್ರಮಾಣ ಮಾಡಲಿದ್ದಾರೆ .
ಉಡುಪಿ ಎಸ್ಪಿ ವಿಷ್ಣುವರ್ಧನ , ಡಿವೈಎಸ್ ಪಿ ಟಿ ಆರ್ ಜೈಶಂಕರ್ , ಪಶ್ಚಿಮ ವಲಯ ಐಜಿಪಿ ಕಚೇರಿಯ ಡಿವೈಎಸ್ ಪಿ ಗೌರೀಶ್ , ಕರಾವಳಿ ಕಾವಲು ಪಡೆ ಇನ್ ಸ್ಪೆಕ್ಟರ್ ರವೀಶ್ ನಾಯಕ್ , ಕುಂದಾಪುರ ಇನ್ ಸ್ಪೆಕ್ಟರ್ ಕೆ ಆರ್ ಗೋಪಾಲಕೃಷ್ಣ , ಉಡುಪಿ ನಗರ ಸರ್ಕಲ್ ಇನ್ಸ್ ಪೆಕ್ಟ್ ಮಂಜುನಾಥ್ , ಡಿಎಆರ್ ಹೆಡ್ ಕಾನ್ ಸ್ಟೇಬಲ್ ಸಂತೋಷ್ , ಮಂಗಳೂರು ನಗರ ಸಿಸಿಬಿ ಎಸ್ ಎಸ್ ಐ ಹರೀಶ್ ಪದವಿನಂಗಡಿ , ಹೆಡ್ ಕಾನ್ ಸ್ಟೆಬಲ್ ಎಣ್ಣೆ ಚಂದ್ರಶೇಖರ , ಉಳ್ಳಾಲ ಠಾಣೆ ಎಎಸ್ ಐ ಎಂ ಸುಂದರ , ಕಾವೂರು ಠಾಣೆ ಹೆಡ್ ಕಾನ್ ಸ್ಟೆಬಲ್ ಕೆ ಗೋಪಾಲಕೃಷ್ಣ , ಗುಪ್ತ ವಾರ್ತಾ ಹೆಡ್ ಕಾನ್ ಸ್ಟೆಬಲ್ ರಶೀದ್ ಅಹ್ಮದ್ ತಹಶಿಲ್ದಾರ್ , ಬಂಟ್ವಾಳ ಠಾಣಾ ಹೆಡ್ ಕಾನ್ ಸ್ಟೆಬಲ್ ಉದಯ ರೈ , ಸಿ ಎ ಆರ್ ಹೆಡ್ ಕಾನ್ ಸ್ಟೆಬಲ್ ವರುಣ್ ಆಳ್ವ , ಸೇರಿದಂತೆ ರಾಜ್ಯದ ಇನ್ನೂರ ನಲವತ್ತ್ 3ಮಂದಿ ಪೊಲೀಸ್ ಸಿಎಂ ಪದಕ ಸ್ವೀಕರಿಸಲಿದ್ದಾರೆ.