ಸಪ್ಟೆಂಬರ್ 28 ರಂದು ನಡೆಯುವ ಕರ್ನಾಟಕ ಬಂದ್ ಗೆ ಸುಳ್ಯ, ಪುತ್ತೂರಿನಲ್ಲೂ ಸಂಘಟನೆಗಳ ಬೆಂಬಲ.
ಸುಳ್ಯ : ಕೇಂದ್ರ ಸರ್ಕಾರದ ರೈತ, ಕಾರ್ಮಿಕ, ದಲಿತ ವಿರೋಧಿ ಮಸೂದೆಗಳನ್ನು ಹಿಂಪಡೆಯಲು ಒತ್ತಾಯಿಸಿ ಸೆಪ್ಟೆಂಬರ್ 28ರಂದು ಸುಳ್ಯದಲ್ಲಿ ಧರಣಿ ರಸ್ತೆ ನಡೆಸಲು ರೈತ, ಕಾರ್ಮಿಕ, ದಲಿತ ಸಂಘಟನೆಗಳು ತೀರ್ಮಾನಿಸಿವೆ. ಕಾರ್ಮಿಕ ಮುಖಂಡ ಕೆ ಪಿ ಜಾನಿ ಹಾಗೂ ರೈತ ಸಂಘದ ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು ತಿಳಿಸಿದ್ದಾರೆ.
ಸೆಪ್ಟೆಂಬರ್ 28 ರಂದು ಬೆಳಿಗ್ಗೆ ಸುಳ್ಯ ಜ್ಯೋತಿ ಸರ್ಕಲ್ ಬಳಿಯಿಂದ ಜಾಥಾ ಹೊರಡಲಿದೆ. ಮುಖ್ಯ ರಸ್ತೆ ಮುಲಕ ಸಾಗಿ ಗಾಂಧಿ ನಗರ ದವರೆಗೆ ಸಾಗಲಿದೆ.
ಮಸೂದೆ ವಿರೋಧಿಸಿ ಎಲ್ಕರೂ ಸ್ವಯಂ ಪ್ರೇರಿತರಾಗಿ ಭಾಗವಹಿಸಬೇಕೆಂದು ಕೆ ಪಿ ಜಾನಿ ಜನರಲ್ಲಿ ಮನವಿ ಮಾಡಿದ್ದಾರೆ.
ಉಪ್ಪಿನಂಗಡಿಯಲ್ಲೂ ಹೋರಾಟ : ಸೆಪ್ಟೆಂಬರ್ 28ರಂದು ಕರೆ ನೀಡಿದ ಹೋರಾಟಕ್ಕೆ ಪುತ್ತೂರಿನಲ್ಲೂ ಬೃಹತ್ ಸಭೆ ನಡೆಸಲು ರೈತ ಸಂಘ ನಿರ್ಧರಿಸಿವೆ.
ಸುದ್ದಿ ಗೋಷ್ಟಿ ಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ದ.ಕ. ಜಿಲ್ಲಾ ಸಂಚಾಲಕ ರೂಪೇಶ ರೈ ಅಲಿಮಾರ್ ತಿಳಿಸಿದ್ದಾರೆ.