ವಾರ್ತಾ ಇಲಾಖೆ ವಾಹನ ಚಾಲಕ ಮಂಜುನಾಥ ನಾಯಕರಿಗೆ ಬಿಳ್ಕೋಡುಗೆ

Source: so news | By MV Bhatkal | Published on 10th May 2019, 12:12 AM | Coastal News | Don't Miss |

ಕಾರವಾರ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರವಾರ ಕಚೇರಿಯಲ್ಲಿ  ಸುರ್ಧಿರ್ಘ 20 ವರ್ಷಗಳ ಕಾಲ ವಾಹನ ಚಾಲಕರಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದಿದ ಮಂಜುನಾಥ ನಾಯಕ ಅವರಿಗೆ ವಾರ್ತಾ ಮತ್ತು ಸಂಪರ್ಕ ಇಲಾಖೆ ಹಾಗೂ ಪತ್ರಕರ್ತ ಮಿತ್ರರಿಂದ ಬುಧವಾರ ಬಿಳ್ಕೋಡಲಾಯಿತು.
ಈ ವೇಳೆ ವೇದಿಕೆ ಮೇಲೆ ಉಪಸ್ಥಿತರಿದ್ದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಹಿಮಂತರಾಜು.ಜಿ ಅವರು ಮಂಜುನಾಥ ನಾಯಕ ವೃತ್ತಿ ಸೇವೆ ಹಾಗೂ ಒಡನಾಟದ ಬಗ್ಗೆ ಮೆಲಕು ಹಾಕಿ ಅವರ ಮುಂದಿನ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು. 
ಕರಾವಳಿ ಮುಂಜಾವು ದಿನ ಪತ್ರಿಕೆಯ ಹಿರಿಯ ವರದಿಗಾರರಾದ ಟಿ.ಬಿ. ಹರಿಕಾಂತ ಹಾಗೂ ಸುವರ್ಣ ನ್ಯೂಸ್ ಚಾನೆಲ್ ಜಿಲ್ಲಾ ವರದಿಗಾರ ಮಂಜುನಾಥ ನಾಯ್ಕ ಸೇರಿದಂತೆ ಇತರೆ ಪತ್ರಕರ್ತ ಮಿತ್ರರು ಮತ್ತು ವಾರ್ತಾ ಇಲಾಖೆಯ ನಶಿರಾಬಿ ಶೇಖ ಅವರು ಸಹಹೃದಯಿ ಮಂಜುನಾಥ ನಾಯಕ ಅವರ ಕಾರ್ಯ ವೈಖರಿಯನ್ನು ಶ್ಲಾಘಿಸಿ, ಅವರೊಂದಿಗೆ ತಮಗಾದಂತಹ ಅನುಭವಗಳ ಅನಿಸಿಕೆಗಳನ್ನು ಹಂಚಿಕೊಂಡರು. 
ವಾರ್ತಾ ಇಲಾಖೆಯ ಗೋವಿಂದ ನಾಯ್ಕ, ಗಂಗಾಧರ ಚಲವಾಧಿ, ಕಮಲಾಬಾಯಿ ನಾಯ್ಕ, ಅಪ್ರೆಂಟಿಸ್ ಟ್ರೈನಿಗಳಾದ ಅರುಣ ತಿತ್ತಿ ಮತ್ತು ಸುನೀಲ ಕಾಂಬಳೆ ಮತ್ತು ಮಾಧ್ಯಮ ಮಿತ್ರರು ಉಪಸ್ಥಿತರಿದ್ದರು.   

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...