ಬಂಟ್ವಾಳದಲ್ಲಿ ಅಪಾಯದ ಮಟ್ಟ ಮೀರಿದ ನೇತ್ರಾವತಿ ನದಿ: ಅಪಾರ ಬೆಳೆ ನಷ್ಟ

Source: S.O. News Service | Published on 8th August 2020, 7:32 PM | Coastal News | Don't Miss |

ಬಂಟ್ವಾಳ: ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಮತ್ತು ಘಟ್ಟ ಪ್ರದೇಶದಲ್ಲಿ ನದಿ ನೀರಿನ ಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ಬಂಟ್ವಾಳದಲ್ಲಿ ಹರಿಯುವ ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿದು ಆತಂಕ ಉಂಟುಮಾಡಿದೆ
ಎರಡು ದಿನಗಳ ಹಿಂದೆ 6ರಿಂದ 7 ಮೀಟರ್‌ ಎತ್ತರದಲ್ಲಿ ಹರಿಯುತ್ತಿದ್ದ ನೀರಿನ ಮಟ್ಟ ಶುಕ್ರವಾರ ರಾತ್ರಿಯ ಬಳಿಕ ಏರಿಕೆ ಕಂಡು ಶನಿವಾರ ಬೆಳಗ್ಗೆ ವೇಳೆಗೆ 9.4 ಮೀಟರ್‌ ಎತ್ತರದಲ್ಲಿ ಹರಿಯಿತು. ಅಪಾಯದ ಮಟ್ಟ 8.5 ಮೀಟರ್‌ ಆಗಿದ್ದು, ಈ ಹಿನ್ನೆಲೆಯಲ್ಲಿ ನದಿ ಸನಿಹದ ತಗ್ಗು ಪ್ರದೇಶಗಳಿಗೆಲ್ಲ ಆವರಿಸಿಕೊಂಡಿದೆ
ಹಲವೆಡೆ ಹಾನಿ: ಗಾಳಿ ಮಳೆಯಿಂದ ತಾಲೂಕಿನ ಹಲವೆಡೆ ವ್ಯಾಪಕ ಹಾನಿಗಳುಂಟಾಗಿವೆ. ಕುಕ್ಕಿಪ್ಪಾಡಿ ಗ್ರಾಮದ ಸಿದ್ಧಕಟ್ಟೆ ಚರ್ಚ್ ಅಂಗನವಾಡಿ ಕೇಂದ್ರದ ಆವರಣಗೋಡೆ ಕುಸಿದುಬಿದ್ದಿದೆ. ಮಳೆನೀರು ಅಂಗನವಾಡಿ ಕಟ್ಟಡದ ಒಳಗೆ ನುಗ್ಗಿ ಹಾನಿ ಸಂಭವಿಸಿದೆ. ಜೊತೆಗೆ ಹಂಚಿನ ಚಾವಣಿಗೂ ಹಾನಿ ಸಂಭವಿಸಿದೆ.

ಮುಂದುವರಿದ ಮಳೆ ಆರ್ಭಟ, ಉಕ್ಕೇರಿದ ನದಿಗಳಿಂದ ತೀರದ ಆತಂಕ

ಡ್ಯಾಂಗಳು ಭರ್ತಿ: ಶಂಭೂರು ಡ್ಯಾಂ ಭರ್ತಿಯಾಗಿದ್ದು, 14 ಗೇಟುಗಳನ್ನು ಶೇ.50ರಷ್ಟು ತೆರೆಯಲಾಗಿದೆ. ಆಗಾಗ ಸೈರನ್‌ ಮೊಳಗಿಸುವ ಮೂಲಕ ನೀರನ್ನು ಹರಿಯಬಿಡಲಾಯಿತು. ತುಂಬೆ ಅಣೆಕಟ್ಟಿನಲ್ಲಿ7.8 ಮೀಟರ್‌ ಎತ್ತರಕ್ಕೆ ನೀರು ಹರಿದಿದೆ. ನಿನ್ನೆ ತುಂಬೆ ಡ್ಯಾಂನಲ್ಲಿ 6.4 ಮೀ ಎತ್ತರದಲ್ಲಿ ಸಂಗ್ರಹವಿತ್ತು. ಇಲ್ಲಿಎಲ್ಲ 30 ಗೇಟುಗಳನ್ನು ತೆರೆಯಲಾಗಿದೆ.

ಜೀವರಕ್ಷಕರು ಸನ್ನದ್ಧ: ಇತ್ತೀಚೆಗೆ ನೇತ್ರಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆಗೈದ ಯುವಕನ ರಕ್ಷಣೆಗೆ ನದಿಗೆ ಧುಮುಕಿದ ಸ್ಥಳೀಯ ಈಜುಗಾರ ಬೇಡಿಕೆಗೆ ಅನುಗುಣವಾಗಿ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನ ಸೇವಾಂಜಲಿ ರಕ್ಷಕ ಎನ್ನುವ ನಾಡದೋಣಿಯನ್ನು ಕೊಡುಗೆಯಾಗಿ ನೀಡಿತ್ತು. ಬಂಟ್ವಾಳದಲ್ಲಿಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದ್ದು ಈಜುಗಾರರಾದ ಸತ್ತಾರ್‌, ಮಹಮ್ಮದ್‌ ಮತ್ತವರ ತಂಡ ದೋಣಿಯ ಮೂಲಕ ಜನರ ರಕ್ಷಣೆಗೆ ಸಿದ್ಧಗೊಂಡು ನಿಂತಿದೆ. ಗೃಹರಕ್ಷಕದಳ, ಅಗತ್ಯವಿದ್ದರೆ ವಿಪತ್ತು ನಿರ್ವಹಣಾ ಪಡೆಯೂ ಆಗಮಿಸಲಿದೆ ಎಂದು ತಹಸೀಲ್ದಾರ್‌ ರಶ್ಮಿ ಎಸ್‌.ಆರ್‌. ತಿಳಿಸಿದ್ದಾರೆ.

‘ಮನೆಬಾಗಿಲಿಗೆ ಮದ್ಯ ಪೂರೈಸುವ ಮನೆಹಾಳು ನಿರ್ಧಾರವನ್ನು ಹಿಂಪಡೆಯಿರಿ’: ಹೆಚ್‌ಡಿಕೆ

ಕಾಳಜಿ ಕೇಂದ್ರಗಳು: ಕಳೆದ ವರ್ಷದಂತೆ ಈ ವರ್ಷವೂ ಬಂಟ್ವಾಳ ತಾಲೂಕಿನ ಏಳು ಕಡೆಗಳಲ್ಲಿ ಕಾಳಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಬಂಟ್ವಾಳ ಐಬಿಯ ಬದಲು ತೌಹೀದ್‌ ಆಂಗ್ಲಮಾಧ್ಯಮ ಶಾಲೆಯಲ್ಲಿಕೇಂದ್ರ ತೆರೆಯಲಾಗಿದೆ. ಇದುವರೆಗೆ ಯಾರೂ ಆಗಮಿಸಿಲ್ಲ, ಪ್ರವಾಹ ಇಳಿಮುಖವಾಗುವ ಸಾಧ್ಯತೆ ಇದ್ದರೂ ಮುಂಜಾಗರೂಕತಾ ಕ್ರಮವಾಗಿ ಎಲ್ಲಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹಾನಿಗೊಳಗಾದ ಪ್ರದೇಶಗಳಿಗೆ ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಹಸೀಲ್ದಾರ್‌ ತಿಳಿಸಿದ್ದಾರೆ.

ಮಳೆ ಅವಾಂತರಗಳು:
ಆಲಡ್ಕ, ಬಡ್ಡಕಟ್ಟೆ, ಗೂಡಿನಬಳಿ ಬಂಟ್ವಾಳ ರಸ್ತೆ ಸಹಿತ ತೀರ ಪ್ರದೇಶಗಳು ಜಲಾವೃತ. ಸಂಜೆ ವೇಳೆ ನೀರು ಇಳಿಮುಖ.
ಪಾಣೆಮಂಗಳೂರು, ಆಲಡ್ಕ, ನಂದಾವರ, ಬೋಗೋಡಿ, ಗೂಡಿನಬಳಿ, ಬಸ್ತಿಪಡ್ಪು, ಬಂಟ್ವಾಳ ಕೆಳಗಿನಪೇಟೆ, ತಲಪಾಡಿ, ಪೊನ್ನೋಡಿ, ತುಂಬೆ, ವಳವೂರು, ಪುದು, ನಾವೂರು, ಅಜಿಲಮೊಗರು ಪ್ರದೇಶಗಳಿಗೆ ನೆರೆ ನೀರು.
ಮಳೆಯಿಂದಾಗಿ ಬಿ.ಸಿ.ರೋಡು- ಧರ್ಮಸ್ಥಳ ರಸ್ತೆಯ ಮಣಿಹಳ್ಳ ಸಮೀಪದ ಹಂಚಿಕಟ್ಟೆಯಲ್ಲಿಮರವೊಂದು ಹೆದ್ದಾರಿಗೆ ಅಡ್ಡವಾಗಿ ಬಿದ್ದ ಪರಿಣಾಮ ಕೆಲಹೊತ್ತು ಸಂಚಾರ ಬಂದ್‌.
ಅಜಿಲಮೊಗರು ಜುಮ್ಮಾ ಮಸೀದಿ ಸಭಾಂಗಣಕ್ಕೆ ನುಗ್ಗಿದ ನೀರು. ಉಪ್ಪಿನಂಗಡಿ- ಬಂಟ್ವಾಳ ರಸ್ತೆ , ನಂದಾವರ ಸಂಪರ್ಕ ಸೇತುವೆಯೂ ಮುಳುಗಡೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...