ಉ.ಪ್ರ.: ದಂಪತಿಯ ಹತ್ಯೆ, ದರೋಡೆ, ಸೂತ್ರಧಾರ 12 ವರ್ಷದ ಬಾಲಕನ ಬಂಧನ

Source: Vb | By I.G. Bhatkali | Published on 26th December 2022, 9:20 AM | National News |

ಗಾಝಿಯಾಬಾದ್: ಉತ್ತರಪ್ರದೇಶದ ಗಾಝಿಯಾಬಾದ್‌ನಲ್ಲಿ ವೃದ್ದ ದಂಪತಿಯನ್ನು ಹತ್ಯೆಗೈದ ಹಾಗೂ ದರೋಡೆಗೈದ ಪ್ರಕರಣದ ಸೂತ್ರಧಾರನೆಂದು ಹೇಳಲಾದ 12 ವರ್ಷದ ಬಾಲಕ ಹಾಗೂ ಇತರ ಇಬ್ಬರನ್ನು ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನವೆಂಬರ್ 22ರಂದು ಗುಜರಿ ವ್ಯಾಪಾರಿ 60 ವರ್ಷದ ಇಬ್ರಾಹೀಂ ಎಂಬವರು ತನ್ನ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ಪತ್ನಿ ಖಾಲಿ ನಿವೇಶನ ವೊಂದರ ಶೌಚಾಲಯದ ಸಮೀಪ ಸಾವನ್ನಪ್ಪಿದ ಸ್ಥಿತಿಯಲ್ಲಿ ಕಂಡು ಬಂದಿದ್ದರು.

ವೃದ್ದ ದಂಪತಿಯ ಹತ್ಯೆ ಹಾಗೂ ದರೋಡೆಯ ಹಿಂದಿರುವ ಸೂತ್ರಧಾರ 12 ವರ್ಷದ ಬಾಲಕ, ದಂಪತಿಗೆ ಬಾಲಕ ಪರಿಚಯಸ್ಥನಾಗಿದ್ದ. ಇಬ್ರಾಹೀಂ ಗುಜರಿ ವ್ಯಾಪಾರದಿಂದ ಸಾಕಷ್ಟು ಹಣ ಗಳಿಸಿದ್ದಾನೆ ಎಂದು ತಿಳಿದ ಬಾಲಕ ದರೋಡೆ ನಡೆಸಲು ಮೂವರನ್ನು ಸೇರಿಸಿಕೊಂಡಿದ್ದ. ಆದರೆ ಅವರು ದರೋಡೆ ನಡೆಸುವ ಸಂದರ್ಭ ದಂಪತಿಯನ್ನು ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಬಾಲಕ ಹಾಗೂ ಮಂಜೇಶ್ ಹಾಗೂ ಶಿವನನ್ನು ಬಂಧಿಸಿದ್ದಾರೆ. ನಾಲ್ಕನೇ ಆರೋಪಿ ಸಂದೀಪ್ ನಾಪತ್ತೆಯಾಗಿದ್ದಾನೆ. ಆರೋಪಿಗಳಿಂದ 12 ಸಾವಿರ ರೂಪಾಯಿ, ಒಂದು ಮೊಬೈಲ್ ಫೋನ್ ಹಾಗೂ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗಾಝಿಯಾಬಾದ್‌ನ ಹಿರಿಯ ಪೊಲೀಸ್‌ ಅಧಿಕಾರಿ ಇರಜ್ ರಾಜಾ ಅವರು ತಿಳಿಸಿದ್ದಾರೆ.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...