ಮಣಿಪುರದಲ್ಲಿ 'ಇಂಡಿಯಾ' ನಿಯೊಗ; ಪರಿಹಾರ ಶಿಬಿರಗಳಿಗೆ ಭೇಟಿ, ಶಾಂತಿಗಾಗಿ ಮನವಿ

Source: Vb | By I.G. Bhatkali | Published on 30th July 2023, 8:24 AM | National News |

ಇಂಫಾಲ: ಮಣಿಪುರದಲ್ಲಿಯ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಲು ಎರಡು ದಿನಗಳ ಭೇಟಿಗಾಗಿ ಪ್ರತಿಪಕ್ಷಗಳ ಮೈತ್ರಿಕೂಟ 'ಇಂಡಿಯಾ'ದ ನಿಯೋಗವು ಶನಿವಾರ ಇಲ್ಲಿಗೆ ತಲುಪಿದೆ. ಚುರಾಚಾಂದ್‌ಪುರ ಜಿಲ್ಲೆಯಲ್ಲಿನ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿದ ನಿಯೋಗದ ಸದಸ್ಯರು ಸ್ಥಳೀಯರು ಮತ್ತು ನಾಗರಿಕ ಸಮಾಜ ಸಂಘಟನೆಗಳೊಂದಿಗೆ ಸಂವಾದ ನಡೆಸಿದರು.

ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ಮೌಲ್ಯಮಾಪನಕ್ಕಾಗಿ ಆಗಮಿಸಿರುವ ಪ್ರತಿಪಕ್ಷ ಇಂಡಿಯಾದ ಸಂಸದೀಯ ನಿಯೋಗವು 20 ಸದಸ್ಯರನ್ನು ಒಳಗೊಂಡಿದೆ. ಮೇ 3ರಿಂದ ಮೈತೈ ಮತ್ತು ಕುಕಿ ಸಮುದಾಯಗಳ ನಡುವೆ ಭುಗಿಲೆದ್ದಿರುವ ಜನಾಂಗೀಯ ಹಿಂಸಾಚಾರದಲ್ಲಿ 160ಕ್ಕೂ ಅಧಿಕ ಜನರು ಮೃತಪಟ್ಟಿದ್ದು, 600ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ.

16 ಪಕ್ಷಗಳ ಪ್ರತಿನಿಧಿಗಳನ್ನು ಒಳಗೊಂಡಿರುವ ನಿಯೋಗವು ರವಿವಾರ ದಿಲ್ಲಿಗೆ ಮರಳುವ ಮುನ್ನ ಗುಡ್ಡಗಾಡು ಜಿಲ್ಲೆಗಳಿಗೆ ಭೇಟಿಯ ಬಳಿಕ ಸಂತ್ರಸ್ತ ಸಮುದಾಯಗಳೊಂದಿಗೆ ಮಾತುಕತೆ ನಡೆಸಲು ಕಣಿವೆ ಜಿಲ್ಲೆಗಳಿಗೆ ತೆರಳಲಿದೆ.

ನಿಯೋಗವು ರವಿವಾರ ಬೆಳಗ್ಗೆ ಮಣಿಪುರದ ರಾಜ್ಯಪಾಲರಾದ ಅನುಸೂಯಾ ಉಯಿಕೆ ಅವರನ್ನು ಭೇಟಿಯಾಗುವ ಸಾಧ್ಯತೆಯಿದೆ.

ಇಂಫಾಲ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಳಿಕ ನಿಯೋಗವನ್ನು ಎರಡು ತಂಡಗಳಾಗಿ ವಿಭಜಿಸಲಾಯಿತು. ಮೊದಲ ತಂಡ ತಕ್ಷಣವೇ ಹೆಲಿಕಾಪ್ಟರ್ ಮೂಲಕ ಚುರಾಚಾಂದ್‌ ಪುರಕ್ಕೆ ತೆರಳಿದರೆ, ಎರಡನೇ ತಂಡವು ಹೆಲಿಕಾಪ್ಟರ್‌ನಲ್ಲಿ ಚುರಾಚಾಂದ್ ಪುರದ ಇನ್ನೊಂದು ಶಿಬಿರಕ್ಕೆ ಭೇಟಿ ನೀಡುವ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿತು.

ಮೊದಲ ತಂಡವು ಚುರಾಚಾಂದ್‌ ಪುರ ಭೇಟಿಯನ್ನು ಮುಗಿಸಿದ ಬಳಿಕ ಮೊಯಿರಾಂಗ್‌ನಲ್ಲಿಯ ಪರಿಹಾರ ಶಿಬಿರಗಳಿಗೆ ಭೇಟಿ ನೀಡಲಿದೆ ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯಿ ಅವರು ಸುದ್ದಿಗಾರರಿಗೆ ತಿಳಿಸಿದರು. ನಿಯೋಗವು ಇಂಫಾಲ ಪೂರ್ವದಲ್ಲಿಯ ಪರಿಹಾರ ಶಿಬಿರಗಳಿಗೂ ಭೇಟಿ ನೀಡಿದೆ.

ಹಿಂಸಾಚಾರವನ್ನು ತೊರೆಯುವಂತೆ ಮತ್ತು ಶಾಂತಿಯ ವಾತಾವರಣವನ್ನು ಮರುಸ್ಥಾಪಿಸುವಂತೆ ಮಣಿಪುರದ ಜನರನ್ನು ಆಗ್ರಹಿಸಿದ ಜೆಡಿಯು ಸಂಸದ ಲಲ್ಲನ್ ಸಿಂಗ್ ಅವರು, ಇಡೀ 'ಇಂಡಿಯಾ' ಇಲ್ಲಿದೆ. ಮಣಿಪುರದ ಜನರೊಂದಿಗೆ ನಾವಿದ್ದೇವೆ ಎಂಬ ಸಂದೇಶದೊಂದಿಗೆ ಇಲ್ಲಿಯ ಸ್ಥಿತಿಯನ್ನು ತಿಳಿದುಕೊಳ್ಳಲು ನಾವಿಲ್ಲಿಗೆ ಬಂದಿದ್ದೇವೆ. ಮಣಿಪುರದಲ್ಲಿ ಭ್ರಾತೃತ್ವದ ವಾತಾವರಣದಲ್ಲಿ ಶಾಂತಿಯಿಂದ ಬದುಕುವಂತೆ ನಾವು ಎಲ್ಲ ಸಮುದಾಯಗಳನ್ನು ಕೋರುತ್ತಿದ್ದೇವೆ. ಮಣಿಪುರದಲ್ಲಿ ಶಾಂತಿ ನೆಲೆಸಬೇಕು ಎಂಬ ಧೈಯದೊಂದಿಗೆ ನಾವಿಲ್ಲಿಗೆ ಬಂದಿದ್ದೇವೆ' ಎಂದು ಹೇಳಿದರು.

ಮಣಿಪುರದ ಪ್ರಾದೇಶಿಕ ಸಮಗ್ರತೆಯ ಸುರಕ್ಷತೆಯ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಿಂಗ್, 'ಭಾರತ ಸರಕಾರಕ್ಕೆ ಮಣಿಪುರದ ಕುರಿತು ಕಾಳಜಿಯಿಲ್ಲ, ಇದೇ ಕಾರಣದಿಂದ ಪ್ರಧಾನಿ ಸದನಕ್ಕೆ ಬಂದು ಮಣಿಪುರ ಕುರಿತು ಸ್ವಯಂಪ್ರೇರಿತ ಹೇಳಿಕೆಯನ್ನು ನೀಡಬೇಕು ಎಂದು ಸಂಸತ್ ಅಧಿವೇಶನದ ಮೊದಲ ದಿನದಿಂದಲೇ ನಾವು ಆಗ್ರಹಿಸುತ್ತಿದ್ದೇವೆ' ಎಂದು ಹೇಳಿದರು.

ಸುಷ್ಠಿತಾ ದೇವ್, ಅಧೀರ್ ರಂಜನ್ ಚೌಧುರಿ, ಗೌರವ್ ಗೊಗೊಯಿ, ರಾಜೀವ್ ರಂಜನ್ ಸಿಂಗ್ ಸೇರಿದಂತೆ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು ನಿಯೋಗದಲ್ಲಿದ್ದಾರೆ.

ನಿಯೋಗವು ಮಣಿಪುರದಲ್ಲಿಯ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರ ಸರಕಾರ ಮತ್ತು ಸಂಸತ್ತಿಗೆ ಶಿಫಾರಸುಗಳನ್ನು ಮಾಡಲಿದೆ.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...