ಭಟ್ಕಳ: ಗುರುವಾರ ರಾತ್ರಿ ಸುರಿದ ಮಳೆಗಾಳಿಗೆ ತಾಲೂಕಿನ ತಾಲೂಕಿನ ವಿವಿದೆಡೆ ಮುರಿದು ಬಿದ್ದ ಮರಗಳೊಂದಿಗೆ 18 ವಿದ್ಯುತ್ ಕಂಬಗಳು ಧರೆಗೆ ಉರುಳಿವೆ.
ವಿದ್ಯುತ್ ಕಂಬ ಹಾಗೂ ತಂತಿಯ ಒಟ್ಟೂ ಹಾನಿಯ ಮೌಲ್ಯ ರು.1,14000 ಎಂದು ಅಂದಾಜಿಸಲಾಗಿದೆ. ಒಂದೆರಡು ಪ್ರಕರಣವನ್ನು ಹೊರತುಪಡಿಸಿದರೆ ಉಳಿದೆಲ್ಲ ಕಂಬಗಳನ್ನು ಶುಕ್ರವಾರ ದುರಸ್ತಿಪಡಿಸಲಾಗಿದೆ ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಂಜುನಾಥ ತಿಳಿಸಿದ್ದಾರೆ.