ಭಟ್ಕಳದ ಉದ್ಯಮಿಗೆ  ಅಪರಿಚಿತ ಯುವತಿಯಿಂದ ಕರೆ; ವಂಚನೆಗೆ ವಿಫಲ ಯತ್ನ

Source: SOnews | By Staff Correspondent | Published on 15th May 2024, 2:56 PM | Coastal News |

 

ಭಟ್ಕಳ:  ಇಂಟರ್‌ನೆಟ್ ಮತ್ತು ಫೋನ್ ಕರೆಗಳ ಮೂಲಕ ವಂಚಿಸಿ ದೊಡ್ಡ ಮೊತ್ತದ ಹಣವನ್ನು ದೋಚುವ ಪ್ರಕರಣಗಳು ಸಾಮಾನ್ಯವಾಗಿದ್ದು, ಇದನ್ನು ತಪ್ಪಿಸುವುದು ತುಂಬಾ ಕಷ್ಟಕರವಾಗಿದೆ. ಭಟ್ಕಳದ ಉದ್ಯಮಿ ನವೀನ್ ರೊಂದಿಗೆ ಇಂತಹದ್ದೇ ಒಂದು ವಿಫಲ ಪ್ರಯತ್ನ ನಡೆದಿದ್ದು ಈ ಕುರಿತು ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.  

ಕಳೆದ ಎರಡು ಮೂರು ದಿನಗಳ ಹಿಂದೆ ನವೀನ್‌ಗೆ ಅಪರಿಚಿತ ನಂಬರ್‌ನಿಂದ ಹಲವು ಬಾರಿ ಫೋನ್‌ ಕರೆಗಳು ಬರುತ್ತಿದ್ದು, ಬ್ಯುಸಿ ಶೆಡ್ಯೂಲ್‌ನಿಂದ ನವೀನ್ ಕರೆಗಳನ್ನು  ಸ್ವೀಕರಿಸುತ್ತಿಲ್ಲ ಎನ್ನಲಾಗಿದೆ. ಕೊನೆಗೆ  ಒಮ್ಮೆ  ಅಪರಚಿತ ಕರೆ ಸ್ವೀಕರಿಸಿದ್ದು ಆ ಕಡೆಯಿಂದ  “ತನ್ನ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಇತ್ಯಾದಿಗಳನ್ನು ನೀಡಿ, ಮೇ 3 ರಂದು ನೀವು ಮುಂಬೈನಿಂದ ಕೊರಿಯರ್ ಮೂಲಕ ತೈವಾನ್‌ಗೆ ಕಳುಹಿಸಿದ ಪಾರ್ಸೆಲ್ ಹಿಂತಿರುಗಿದೆ ಎಂದು ಯುವತಿಯ ದ್ವನಿಯೊಂದು ಕೇಳಿ ಬರುತ್ತಿದೆ.  ಮುಂಬೈ ವಿಮಾನ ನಿಲ್ದಾಣದಲ್ಲಿ ನಿಷೇಧಿತ ವಸ್ತುಗಳಿದ್ದ ಕಾರಣ ಕಸ್ಟಮ್ಸ್ ಪಾರ್ಸೆಲ್ ವಶಪಡಿಸಿಕೊಂಡಿದೆ ಎಂದು ಸಂಭಾಷಣೆ ಮುಂದುವರೆಯುತ್ತದೆ.

ಇದನ್ನು ಕೇಳಿದ ನವೀನ್ ಸ್ವಲ್ಪ ಹೊತ್ತು ಚಿಂತಾಕ್ರಾಂತನಾಗಿದ್ದು ​​ನಂತರ ನಾನು ಯಾವುದೇ ಪಾರ್ಸೆಲ್ ಕಳುಹಿಸಿಲ್ಲ ಎಂದು ಕರೆ ಮಾಡಿದ ಹುಡುಗಿಗೆ ಹೇಳುತ್ತಾರೆ. ಹಾಗೆಯೇ ನಾನು ಕರ್ನಾಟಕದಲ್ಲಿ ವಾಸವಾಗಿರುವುದರಿಂದ ಮುಂಬೈನಿಂದ ಕೊರಿಯರ್ ಕಳುಹಿಸುವ ಪ್ರಶ್ನೆಯೇ ಇಲ್ಲ. ನಿಮ್ಮ ಗುರುತಿನ ದಾಖಲೆಗಳೊಂದಿಗೆ ಪಾರ್ಸೆಲ್ ಕಳುಹಿಸಲಾಗಿದೆ ಎಂದು  ಆಕಡೆಯ ಯುವತಿ ಹೇಳುತ್ತಾಳೆ. ನಾವು ಅದರಲ್ಲಿ ಪಟ್ಟಿ ಮಾಡಲಾದ ಫೋನ್ ಸಂಖ್ಯೆಗೆ ಕರೆ ಮಾಡಿದ್ದೇವೆ ಮತ್ತು ಅದು ನಿಮ್ಮ ಸಂಖ್ಯೆಯಾಗಿದೆ. ಈ ಸಮಸ್ಯೆ ಹೇಗೆ ಬಗೆಹರಿಯುತ್ತದೆ ಎಂದು ನವೀನ್ ಕೇಳಿದಾಗ, ಎರಡು ಲಕ್ಷ ರೂಪಾಯಿ ಕೊಟ್ಟರೆ ಈ ಸಮಸ್ಯೆ ಬಗೆಹರಿಸಬಹುದು ಎಂದು ಯುವತಿ ಹೇಳುತ್ತಾಳೆ. ಹಣ ಪಾವತಿಸದಿದ್ದರೆ ಏನಾಗುತ್ತದೆ ಎಂದು ನವೀನ್ ಕೇಳಿದಾಗ, ಮಂಗಳೂರು ವಿಮಾನ ನಿಲ್ದಾಣಕ್ಕೆ ವಿಷಯ ತಿಳಿಸಲಾಗಿದ್ದು, ಕಸ್ಟಮ್ಸ್ ಅಧಿಕಾರಿಗಳು ನಿಮ್ಮನ್ನು ಬಂಧಿಸಲು ಯಾವಾಗ ಬೇಕಾದರೂ ಆಗಮಿಸಬಹುದು ಎಂದು ಹೇಳುತ್ತಿರುವುದು ವೈರಲ್ ಆಡಿಯೋದಲ್ಲಿ ಕೇಳಿ ಬರುತ್ತಿದೆ.

ಇದನ್ನೆಲ್ಲ ಕೇಳಿದ ನವೀನ್, ‘ಏನು ಮಾಡಬೇಕೋ ಅದನ್ನು ಮಾಡು, ನಾನು ಹಣ ಕೊಡಲು ಹೋಗುವುದಿಲ್ಲ’ ಏನಾಗುತ್ತದೆ ಎಂದು ನಾನು ನೋಡುತ್ತೇನೆ. ಎಂದು ಕರೆಯನ್ನು ಸ್ಥಗಿತಗೊಳಿಸುತ್ತಾನೆ. ನವೀನ್ ಮತ್ತು ವಂಚಕರ ನಡುವಿನ ಈ ಸಂಭಾಷಣೆಯ ಧ್ವನಿಮುದ್ರಣ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಇಂತಹ ವಂಚನೆಗಳಿಗೆ ಅದೆಷ್ಟೋ ಜನರು ಬಲಿಯಾಗುತ್ತಿದ್ದಾರೆ ಎನ್ನುವುದು ಮಾತ್ರ ಇನ್ನೂ ಗೌಪ್ಯವಾಗಿಯೆ ಉಳಿದಿದೆ.

Read These Next

ಗುಡ್ಡ ಕುಸಿತದಿಂದ ನಾಪತ್ತೆಯಾಗಿರುವ ಲಾರಿ ಚಾಲಕ ಅರ್ಜುನ್ ಪತ್ತೆಹಚ್ಚುವ ಕಾರ್ಯಾಚರಣೆ ;ಪೊಕ್ಲೆನ್ ಯಂತ್ರ ಬಳಸಿ ಕಾರ್ಯಾಚರಣೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಶಿರೂರಿನಲ್ಲಿ ಸಂಭವಿಸಿದ ಭಾರೀ ಗುಡ್ಡ ಕುಸಿತದಿಂದ ನಾಪತ್ತೆಯಾಗಿರುವ ಲಾರಿ ಚಾಲಕ ಅರ್ಜುನ್ ...