ಗೋಕರ್ಣ:ಅಕ್ರಮ ಟ್ಯಾಟೂ ದಂಧೆ ಅಪಾಯಕಾರಿ ಸಕ್ರಮಕ್ಕೆ ತಿಂಗಳ ಗಡುವು

Source: so news | By MV Bhatkal | Published on 16th June 2019, 7:52 PM | Coastal News | Don't Miss |

ಗೋಕರ್ಣ: ಅವೈಜ್ಞಾನಿಕ ಹಾಗೂ ಸುರಕ್ಷಿತವಲ್ಲದ ಟ್ಯಾಟೂ (ಹಚ್ಚೆ) ಕೇಂದ್ರಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ ಎಂಬ ಭೀತಿಯ ಕಾರಣ ಜಿಲ್ಲಾಡಳಿತವು ಅವುಗಳ ನಿಯಂತ್ರಣಕ್ಕೆ ಮುಂದಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಕಚೇರಿ ಹಾಗೂ ಆರೋಗ್ಯ ಇಲಾಖೆಗಳಿಂದ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ.
ಈ ಸಂಬಂಧ ಇಲ್ಲಿ ಕೆಲವು ದಿನಗಳ ಹಿಂದೆ ವೈದ್ಯಾಧಿಕಾರಿ ಜಗದೀಶ ನಾಯ್ಕ ನೇತೃತ್ವದಲ್ಲಿ ಟ್ಯಾಟೂ ಉದ್ಯೋಗಿಗಳ ಸಭೆ ಹಮ್ಮಿಕೊಳ್ಳಲಾಗಿತ್ತು.
ಹೆಚ್ಚಿನ ಆದಾಯದ ದಂಧೆ: ಗೋಕರ್ಣದಲ್ಲಿ ಟ್ಯಾಟೂ ಉದ್ಯಮ ಹೆಚ್ಚಿನ ಆದಾಯದ ದಂಧೆಯಾಗಿದೆ. ವೈದ್ಯಾಧಿಕಾರಿ ನೀಡಿದ ಮಾಹಿತಿಯಂತೆ 25ಕ್ಕೂ ಹೆಚ್ಚು ಟ್ಯಾಟೂ ಕೇಂದ್ರಗಳಿವೆ. ರಥಬೀದಿ, ಮೇನ್ ಬೀಚ್, ಓಂ ಬೀಚ್ ಹಾಗೂ ಕುಡ್ಲೆ ಬೀಚ್‌ನಲ್ಲಿ ಟ್ಯಾಟೂ ಅಂಗಡಿಗಳನ್ನು ಹಾಕಲಾಗಿದೆ. 100ಕ್ಕೂ ಹೆಚ್ಚು ಜನ ಇದನ್ನು ಆದಾಯ ಮೂಲವನ್ನಾಗಿ ಆಶ್ರಯಿಸಿದ್ದಾರೆ.
ಅವರೇ ನೀಡಿದ ಮಾಹಿತಿಯಂತೆ ವರ್ಷಕ್ಕೆ ಸರಾಸರಿ ಒಂದು ಲಕ್ಷ ಜನ ಹಚ್ಚೆ ಹಾಕಿಸಿಕೊಳ್ಳುತ್ತಿದ್ದಾರೆ. ಒಂದು ಅಂಗಡಿಯಲ್ಲಿ ದಿನಕ್ಕೆ ಸರಾಸರಿ 15 ಜನರಿಗೆ ಹಚ್ಚೆ ಹಾಕಲಾಗುತ್ತದೆ. ಎಲ್ಲಾ ಸೇರಿ ಪ್ರತಿ ದಿನ 300ರಿಂದ 400 ಜನ ಹಚ್ಚೆ ಹಾಕಲಾಗುತ್ತದೆ. ಒಂದು ಹಚ್ಚೆಗೆ ಕನಿಷ್ಠ ₹ 400 ತೆಗೆದುಕೊಳ್ಳಲಾಗುತ್ತದೆ. ಈ ದಂಧೆಯಲ್ಲಿ ಹೆಚ್ಚಿನ ಆದಾಯ ಇರುವುದರಿಂದ ವರ್ಷದಿಂದ ವರ್ಷಕ್ಕೆ ಅಂಗಡಿಗಳ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಇವರಲ್ಲಿ ಕೆಲವರು ತಿಂಗಳಿಗೆ ₹ 20 ಸಾವಿರ ಬಾಡಿಗೆ ನೀಡುವವರೂ ಇದ್ದಾರೆ.

ಟ್ಯಾಟೂ ಅಂಗಡಿ ಮಾಲೀಕರು ಕಟ್ಟುನಿಟ್ಟಿನ ಕಾನೂನು ಕ್ರಮ ಅನುಸರಿಸಬೇಕಿದೆ. ನಿಯಮದಂತೆ ವೈದ್ಯಕೀಯ ಪ್ರಯೋಗಾಲಯದ ಮಾದರಿಯಲ್ಲಿ ಕಾರ್ಯ ನಿರ್ವಹಿಸಬೇಕು. ಸ್ಥಳೀಯ ಪಂಚಾಯ್ತಿಯ ಜೊತೆಗೆ ಆರೋಗ್ಯ ಇಲಾಖೆಯ ಪರವಾನಗಿ ಕೂಡ ಕಡ್ಡಾಯವಾಗಿದೆ. ಆದರೆ, ಗೋಕರ್ಣದಲ್ಲಿ ಇದ್ಯಾವುದನ್ನೂ ಅನುಸರಿಸದಿರುವುದು ಆತಂಕಕ್ಕೆ ಕಾರಣವಾಗಿದೆ.

ಒಂದು ಸಲ ಹಚ್ಚೆ ಹಾಕುವಾಗ ಕನಿಷ್ಠ 500 ಸಲ ಸೂಜಿಯಿಂದ ಚುಚ್ಚಬೇಕಾಗುತ್ತದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದೆ. ಹಚ್ಚೆ ಹಾಕಲು ಬಗೆ ಬಗೆಯ ಆಕಾರಗಳ ಸೂಜಿ ಯನ್ನು ಬಳಸಲಾಗುತ್ತದೆ.ಇದು ನೇರವಾಗಿ ಟ್ಯಾಟೂ ಹಾಕಿಸಿಕೊಳ್ಳುವರ ರಕ್ತದೊಂದಿಗೆ ಸಂಪರ್ಕ ಹೊಂದುತ್ತದೆ. ಒಬ್ಬರಿಗೆ ಬಳಸಿದ
ಸೂಜಿಯನ್ನು ಇನ್ನೊಬ್ಬರಿಗೆ ಬಳಸುವುದರಿಂದ ಎಚ್‌ಐವಿ,
ಹೆಪಟೈಟಿಸ್–ಬಿ ರೋಗಗಳು ಹರಡುವ ಸಾಧ್ಯತೆ ದಟ್ಟವಾಗಿದ ಎನ್ನುವುದು ಹಲವರ ಆತಂಕವಾಗಿದೆ.
ಇದನ್ನು ಮನಗೊಂಡ ವೈದ್ಯಾಧಿಕಾರಿ ಜಗದೀಶ ನಾಯ್ಕ, ಟ್ಯಾಟೂ ಉದ್ಯಮಿಗಳಿಗೆ ಕಾನೂನಿನಂತೆ ಅವಶ್ಯವಿರುವ ಕ್ರಮಗಳನ್ನು ಜರುಗಿಸಲು ಸೂಚಿಸಿದ್ದಾರೆ. ಇದಕ್ಕೆ ಒಂದು ತಿಂಗಳ ಸಮಯ ನೀಡಿ ಉದ್ಯಮವನ್ನು ಸಕ್ರಮಗೊಳಿಸಲು ಆದೇಶಿಸಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...