ಇಂಫಾಲ: ಮಣಿಪುರದ ಬಿಷ್ಣುಪುರ ಹಾಗೂ ಚುರಾಚಾಂದ್ಪುರ ಜಿಲ್ಲೆಗಳಲ್ಲಿ ಶನಿವಾರ ಬೆಳಗ್ಗೆ ಭುಗಿಲೆದ್ದ ಹಿಂಸಾಚಾರದಲ್ಲಿ ಐವರು ಮೃತಪಟ್ಟಿದ್ದಾರೆ. ಸಾವನ್ನಪ್ಪಿದವರಲ್ಲಿ ಮೂವರು ಮೈತೈಗಳಾಗಿದ್ದು, ಇನ್ನಿಬ್ಬರು ಕುಕಿ ಝೂe ಸಮುದಾಯದವರೆಂದು ತಿಳಿದುಬಂದಿದೆ.
ಬಿಷ್ಣುಪುರದಲ್ಲಿ ಕುಕಿ ಝೂe ಸಮುದಾಯದ ಗುಂಪೊಂದು ಮೈತೈಗಳ ಮನೆಗಳ ಮೇಲೆ ನಡೆಸಿದ ದಾಳಿಗಳಲ್ಲಿ ಮೂವರು ಸಾವನ್ನಪ್ಪಿದ್ದಾರೆಂದು ಬಿಷ್ಣುಪುರದ ಜಿಲ್ಲಾಧಿಕಾರಿ ಲೂರೆಂಬಾಮ್ ವಿಕ್ರಮ್ ತಿಳಿಸಿದ್ದಾರೆ. ತರುವಾಯ ಚುರಾಚಾಂದ್ಪುರ ಜಿಲ್ಲೆಯಲ್ಲಿ ದುಷ್ಕರ್ಮಿಗಳ ಗುಂಪೊಂದು ಇಬ್ಬರು ಕುಕಿಗಳನ್ನು ಹತ್ಯೆಗೈದಿದೆಯೆಂದು ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.
ಮೈತೈ ಪ್ರಾಬಲ್ಯದ ಬಿಷ್ಣುಪುರ ಜಿಲ್ಲೆ ಹಾಗೂ ಕುಕಿಗಳು ಅಧಿಕ ಸಂಖ್ಯೆಯಲ್ಲಿರುವ ಚುರಾಚಾಂದ್ಪುರ ಜಿಲ್ಲೆಯ ಪೊಲ್ ಜಾಂಗ್ ಗ್ರಾಮದ ಸುತ್ತಮುತ್ತಲಿನ ಪ್ರದೇಶದ ಆಸುಪಾಸಿನ ಸ್ಥಳಗಳಲ್ಲಿ ಶನಿವಾರ ಮುಂಜಾನೆ 4 ಗಂಟೆಯ ವೇಳೆಗೆ ಹಿಂಸಾಚಾರ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಿಷ್ಣುಪುರ ಜಿಲ್ಲೆಯ ಕ್ವಾಕ್ಕಾದಲ್ಲಿ ನಿದ್ರಿಸುತ್ತಿದ್ದ ಮುಂಜಾನೆ 5:00ರಿಂದ ಬೆಳಗ್ಗೆ 10:30 ರವರೆಗೆ ಸೀಮಿತಗೊಳಿಸಲಾಗಿದೆ. ಇದಕ್ಕೂ ಮುನ್ನ ಮುಂಜಾನೆ 5:00ರಿಂದ ಸಂಜೆ 6 ಗಂಟೆಯವರೆಗೂ ಕರ್ಥ್ಯ ಸಡಿಲಿಕೆಯಿತ್ತು.
ಈ ಮಧ್ಯೆ ಮಣಿಪುರದ 27 ವಿಧಾನಸಭಾ ಕ್ಷೇತ್ರಗಳ ಹೋರಾಟ ಸಮಿತಿಯೊಂದು ಆಯೋಜಿ ಸಿದ 24 ತಾಸುಗಳ ಸಾರ್ವತ್ರಿಕ ಮುಷ್ಕರದಿಂದಾಗಿ ಇಂಫಾಲ ಕಣಿವೆ ಪ್ರದೇಶದಲ್ಲಿ ಜನಜೀವನ ಸ್ತಬ್ದ ಗೊಂಡಿತು. ಹೆಚ್ಚಿನ ಕಡೆಗಳಲ್ಲಿ ಮಾರುಕಟ್ಟೆಗಳು ಹಾಗೂ ಅಂಗಡಿಮುಂಗಟ್ಟೆಗಳು ಮುಚ್ಚಿದ್ದವು.
ಆಗಸ್ಟ್ 4ರಂದು ಕೌಟುರ್ಕ್ ಬೆಟ್ಟ ಪ್ರದೇಶ ಗಳಲ್ಲಿ ಸ್ಥಾಪಿಸಲಾದ ಅಕ್ರಮ ಬಂಕರ್ಗಳನ್ನು ಭದ್ರತಾಪಡೆಗಳು ನಾಶಪಡಿಸಿವೆ. ಬಿಷ್ಣುಪುರ ಜಿಲ್ಲೆಯ ನರನ್ನಾದಲ್ಲಿರುವ ಭಾರತೀಯ ಮೀಸಲು ಪಡೆಯ ಬೆಟಾಲಿಯನ್ನ ನೆಲೆಯಿಂದ ಗುಂಪೊಂದು ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದ ಘಟನೆಯ ಮರುದಿನವೇ ಸಶಸ್ತ್ರಪಡೆಗಳು ಈ ಕಾರ್ಯಾಚರಣೆ ನಡೆಸಿವೆ.