ಅಂಕೋಲ:ಟ್ಯಾಂಕರ್ ಮತ್ತು ಕಾರು ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ನಾಲ್ಕು ಜನ ಸಾವು
ಕಾರವಾರ: ಟ್ಯಾಂಕರ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ನಾಲ್ಕು ಜನ ಸ್ಥಳದಲ್ಲೇ ಸಾವುಕಂಡು ಒಬ್ಬರು ಗಂಭೀರ ಘಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಹಾರವಾಡ ಬಳಿ ನಡೆದಿದೆ.
ರಮೇಶ್ ಕೃಷ್ಣಪ್ಪ (30), ಮೀನಾ ಅಲಿಯಾಸ್ ಮೀನಾಕ್ಷಿ (30), ಪ್ರಭಾವತಿ ಚಿಕ್ಕೆಗೌಡಾ (35),
ವಿನಯ್ ಎಸ್ ಒ ವೆಂಕಟರಮಣಪ್ಪ (39) ಮೃತ ದುರ್ದೈವಿಗಳು,
ಅಂಕೋಲಾ ಕಡೆಯಿಂದ ಕಾರವಾರದತ್ತ ಹೊರಟ ಕಾರಿಗೆ ಎದುರಿನಿಂದ ಓವರ್ ಟೇಕ್ ಮಾಡಿಕೊಂಡು ಬಂದ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಟ್ಯಾಂಕರ್ ಚಾಲಕನ ನಿರ್ಲಕ್ಷ್ಯ ದ ಚಾಲನೆಯಿಂದ ಡಿಕ್ಕಿ ಸಂಭವಿಸಿದ್ದು ಕಾರನ್ನು ಸುಮಾರು 100 ಮೀ. ದೂರದ ವರೆಗೂ ನೂಕಿಕೊಂಡು ಹೋಗಿದೆ.
ಘಟನೆ ಸಂಬಂಧ ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಕಲಾಗಿದೆ.