ಮುಂಡಗೋಡ: ಬಿಸಿಲಿಗೆ ಒಣಗಲು ರಾಶಿಹಾಕಿದ ಜೋವಿನ ಜೋಳದ ತೆನೆಗಳಿಗೆ ಆಕಸ್ಮಿಕ ಬೆಂಕಿ ತಗುಲಿ ರೈತನಿಗೆ ಅಪಾರ ನಷ್ಟವುಂಟಾದ ಘಟನೆ ತಾಲೂಕಿ ನಂದಿಗಟ್ಟಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಲಿಹೊಂಡ ಗ್ರಾಮದಲ್ಲಿ ಜರುಗಿದೆ.
ಮೃತ್ಯುಂಜಯ ಹಿರೇಮಠ ಎಂಬ ರೈತನಿಗೆ ಸೇರಿದ ಗೋವಿನ ಜೋಳದ ರಾಶಿಗೆ ಬೆಂಕಿ ತಗುಲಿದೆ 5 ಎಕರೆಯಲ್ಲಿ ಬೆಳೆದ 50ಕ್ವಿಂಟಲ್ ಗೋವಿನ ಜೋಳದ ತೆನಗೆಳನ್ನು ಒಣಗಿಸಲು ತಮ್ಮ ಹೊಲದಲ್ಲಿ ರಾಶಿ ಹಾಕಿದ್ದರು. ಕಸಕಡ್ಡಿಗೆ ಹಚ್ಚಿದ ಬೆಂಕಿಯ ಕಿಡಿ ಗೋವಿನಜೋಳದ ರಾಶಿಗೆ ತಗುಲಿದ್ದು ಇದರ ಪರಿಣಾಮ ತೆನೆಗಳೆಗೆಲ್ಲಾ ಬೆಂಕಿ ಹೊತ್ತುಕೊಂಡು ಉರಿದು ಕರಕಲಾಗಿವೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳವು ಬೆಂಕಿಯನ್ನು ನಂದಿಸಿ ಹೆಚ್ಚಿನ ಹಾನಿಯಾಗುವುದನ್ನು ತಪ್ಪಿಸಿದ್ದಾರೆ. ಬೆಂಕಿಯ ಅವಘಡದಿಂದ ಸುಮಾರು 15ಸಾವಿರ ರೂ ಮೌಲ್ಯದ ಗೋವಿನ ಜೋಳ ಬೆಂಕಿಗೆ ಆಹುತಿಯಾಗಿದೆ ಎಂದು ಹೇಳಲಾಗಿದೆ.