ಗೋವಿನಜೋಳದ ರಾಶಿಗೆ ಬೆಂಕಿ ರೈತನಿಗೆ ಅಪಾರ ಹಾನಿ

Source: sonews | By Staff Correspondent | Published on 25th November 2020, 10:52 PM | Coastal News | Don't Miss |

ಮುಂಡಗೋಡ: ಬಿಸಿಲಿಗೆ ಒಣಗಲು ರಾಶಿಹಾಕಿದ ಜೋವಿನ ಜೋಳದ ತೆನೆಗಳಿಗೆ ಆಕಸ್ಮಿಕ ಬೆಂಕಿ ತಗುಲಿ ರೈತನಿಗೆ ಅಪಾರ ನಷ್ಟವುಂಟಾದ ಘಟನೆ ತಾಲೂಕಿ ನಂದಿಗಟ್ಟಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಲಿಹೊಂಡ ಗ್ರಾಮದಲ್ಲಿ ಜರುಗಿದೆ.

ಮೃತ್ಯುಂಜಯ  ಹಿರೇಮಠ ಎಂಬ ರೈತನಿಗೆ  ಸೇರಿದ ಗೋವಿನ ಜೋಳದ ರಾಶಿಗೆ ಬೆಂಕಿ ತಗುಲಿದೆ 5 ಎಕರೆಯಲ್ಲಿ ಬೆಳೆದ 50ಕ್ವಿಂಟಲ್ ಗೋವಿನ ಜೋಳದ ತೆನಗೆಳನ್ನು ಒಣಗಿಸಲು ತಮ್ಮ ಹೊಲದಲ್ಲಿ ರಾಶಿ ಹಾಕಿದ್ದರು. ಕಸಕಡ್ಡಿಗೆ ಹಚ್ಚಿದ ಬೆಂಕಿಯ ಕಿಡಿ ಗೋವಿನಜೋಳದ ರಾಶಿಗೆ ತಗುಲಿದ್ದು ಇದರ ಪರಿಣಾಮ ತೆನೆಗಳೆಗೆಲ್ಲಾ ಬೆಂಕಿ ಹೊತ್ತುಕೊಂಡು ಉರಿದು ಕರಕಲಾಗಿವೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳವು ಬೆಂಕಿಯನ್ನು ನಂದಿಸಿ ಹೆಚ್ಚಿನ ಹಾನಿಯಾಗುವುದನ್ನು ತಪ್ಪಿಸಿದ್ದಾರೆ. ಬೆಂಕಿಯ ಅವಘಡದಿಂದ ಸುಮಾರು 15ಸಾವಿರ ರೂ ಮೌಲ್ಯದ ಗೋವಿನ ಜೋಳ ಬೆಂಕಿಗೆ ಆಹುತಿಯಾಗಿದೆ ಎಂದು ಹೇಳಲಾಗಿದೆ.
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...