ಮಂಗಳೂರು : ಕೃಷಿ ವಿರೋಧಿ ಕಾನೂನನ್ನು ಹಿಂಪಡೆಯಲು ಎಸ್.ಡಿ.ಪಿ.ಐ ಯಿಂದ ಮಂಗಳೂರಿನ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಯಿತು.
ದೇಶದೆಲ್ಲೆಡೆ ರೈತ ವಿರೋಧಿ ಕಾನೂನನ್ನು ಹಿಂಪಡೆಯಲು ಪ್ರತಿಭಟನೆ ನಡೆಯುತ್ತಿದ್ದು, ಮಂಗಳೂರಿನಲ್ಲಿ ಎಸ್.ಡಿ.ಪಿ.ಐ ವತಿಯಿಂದ ರೈತ ಐಕ್ಯತಾ ಸಂಗಮ ನಡೆಯಿತು.
ಪ್ರತಿಭಟನೆಗೆ ಎಸ್.ಡಿ.ಪಿ.ಐ ನ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಭಾಗವಹಿಸಿ ಮಾತನಾಡಿದರು. ರೈತ .ಕಾರ್ಮಿಕರಿಗೆ ಹಾಗೂ ಜನಸಾಮನ್ಯರಿಗೆ ವಿರುದ್ದವಾದ ಕಾನೂನನ್ನು ಬಿಜೆಪಿ ತರುತ್ತಿದೆ. ಈ ಹಿಂದೆ ಎನ್.ಆರ್.ಸಿ.ಮತ್ತು ಸಿ.ಎ.ಎ ಪ್ರತಿಭಟನೆ ವೇಳೆ ಆನೇಕ ಮುಸ್ಲೀಮ್ ರನ್ನು ಬಂಧಿಸಿದೆ. ಬಿಜೆಪಿ ಸರ್ಕಾರ ರೈತರ ಹೆಸರಲ್ಲಿ ಪ್ರತಿಜ್ಞೆ ಪಡೆದು ಈಗ ಅವರಿಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿದರು.