ಶಿವಮೊಗ್ಗ: ಕರೀಮಾ ಅಂಬ್ರೀನ್ಗೆ ಡಾಕ್ಟರೇಟ್ ಪದವಿ
ಶಿವಮೊಗ್ಗ : ಕರೀಮಾ ಅಂಬ್ರೀನ್ ಕೋಂ ಮೊಹಮ್ಮದ್ ಖಿಜ್ಹರ್ ಇಕ್ಬಾಲ್ ಇವರು ಪ್ರಾಣಿ ಶಾಸ್ತ್ರ ವಿಭಾಗದಲ್ಲಿ ವಿಶೇಷ ಸಂಶೋಧನೆ ನಡೆಸಿ "ಜಿನೋಟಾಕ್ಸೀಸಿಟಿ ಅಂಡ್ ಬಯೋಕೆಮಿಕಲ್ ಸ್ಟಡೀಸ್ ಇನ್ ಸೈಪ್ರಿನಸ್ ಕಾರ್ಪಿಯೋ (ಎಲ್) ಡ್ಯೂ ಟು ಕ್ಲೋರ್ಪೈರಿಫೋಸ್ ಟ್ರೀಟ್ಮೆಂಟ್" ಎಂಬ ವಿಷಯದ ಮೇಲೆ ಮಂಡಿಸಿದ್ದ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಇವರಿಗೆ ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯ ಜ್ಞಾನ ಸಹ್ಯಾದ್ರಿಯ ಪ್ರಾಣಿಶಾಸ್ತ್ರ ವಿಭಾಗದ ಪ್ರೊಫೆಸರ್ ಡಾ|| ಎಂ. ವೆಂಕಟೇಶ್ವರಲು ಮಾರ್ಗದರ್ಶನ ಮಾಡಿರುತ್ತಾರೆ.
ಚಿಕ್ಕಮಗಳೂರು ಜಿಲ್ಲೆ ತರಿಕೆರೆಯವರಾದ ಇವರು ಎಸ್.ಮೊಹಮ್ಮದ್ ಮುಕ್ತರ್ ಹುಸೇನ್ ಹಾಗೂ ಶ್ರೀಮತಿ ಮುಮ್ತಾಜ್ ಬೇಗಂ ದಂಪತಿಗಳ ಪುತ್ರಿ.