ಅಕ್ಡೋಬರ್ 9ರಂದು ದೇವಾಡಿಗ ಸಮಾಜದ ಪ್ರತಿಭಾ ಪುರಸ್ಕಾರ ಮತ್ತು ಸಮಾವೇಶ.
ಭಟ್ಕಳ : ಉತ್ತರ ಕನ್ನಡ ಜಿಲ್ಲಾ ದೇವಾಡಿಗ ಸಮಾಜ ನೌಕರ ಸಂಘ(ರಿ), ಮುರುಡೇಶ್ವರ ವತಿಯಿಂದ ದಿನಾಂಕ 09-10-2022ರಂದು ರವಿವಾರ ಸಂಜೆ 3.00 ಗಂಟೆಗೆ ಶ್ರೀ ದುರ್ಗಾಪರಮೇಶ್ವರಿ ದೇವಾಡಿಗ ಸಭಾ ಭವನ, ಯಕ್ಷೆಮನೆ, ಬೆಂಗ್ರೆಯಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ದೇವಾಡಿಗ ಸಮಾಜ ನೌಕರರ ಸಮಾವೇಶ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.
2021-22ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಶೇ. 90%ಕ್ಕಿಂತ ಹೆಚ್ಚು ಅಂಕ ಪಡೆದ ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ (ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗ) ಶೇ. 85%ಕ್ಕಿಂತ ಹೆಚ್ಚಿಗೆ ಹಾಗೂ ಪದವಿ ವಿಭಾಗದಲ್ಲಿ ಕಲಾ, ವಾಣಿಜ್ಯ, ವಿಜ್ಞಾನ, ಬಿ.ಬಿ.ಎ., ಬಿ.ಸಿ.ಎ. ಹಾಗೂ ಬಿ.ಬಿ.ಎಂ. ವಿಭಾಗದಲ್ಲಿ ಶೇ. 85%ಕ್ಕಿಂತ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ದಿನಾಂಕ: 05-10-2022 ರೊಳಗೆ ಸಂಘಕ್ಕೆ ಅರ್ಜಿ ಸಲ್ಲಿಸಲು ತಿಳಿಸಿದೆ.
ಅರ್ಜಿಯ ಜೊತೆಗೆ ಅಂಕಪಟ್ಟಿಯ ದೃಢೀಕೃತ ನಕಲು ಹಾಗೂ ಆಧಾರ್ ಕಾರ್ಡಿನ ನಕಲು ಪ್ರತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕಾಗಿ ಕೋರಿದ್ದಾರೆ. ಅರ್ಜಿ ಸಲ್ಲಿಸಬೇಕಾದ ವಿಳಾಸ: ವೆಂಕಟೇಶ ಎಸ್. ದೇವಾಡಿಗ,
ಶಿಕ್ಷಕರು, ಶ್ರೀ ಗಣೇಶ ಕೃಪಾವೀರ ವಿಠ್ಠಲ ರಸ್ತೆ, ಭಟ್ಕಳ-581 320
ಮೊಬೈಲ್: 9481275147 ಸಂಪರ್ಕಿಸಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ನಾರಾಯಣ ದೇವಡಿಗ , 9741399930, ಮಾದೇವ ಗದ್ದೆಮನೆ - 9449105559, ಪದ್ಮಯ್ಯ ದೇವಡಿಗ - 9591056030