ತ್ರಿಪುರಾ ಹಿಂಸಾಚಾರ ಪರಿಶೀಲನೆಗೆ ಹೋದ ತಂಡದ ಮೇಲೆ ಹಲ್ಲೆ

Source: Vb | By I.G. Bhatkali | Published on 12th March 2023, 12:13 PM | National News |

ಅಗರ್ತಲ(ತ್ರಿಪುರಾ): ತ್ರಿಪುರಾದಲ್ಲಿ ನಡೆದಿದೆಯೆನ್ನಲಾದ ಚುನಾವಣೋತ್ತರ ಹಿಂಸಾಚಾರದ ಹಿನ್ನೆಲೆಯಲ್ಲಿ ಪರಿಶೀಲನೆಗಾಗಿ ರಾಜ್ಯಕ್ಕೆ ತೆರಳಿದ್ದ ಕಾಂಗ್ರೆಸ್ ಮತ್ತು ಎಡ ಪಕ್ಷಗಳ ಶಾಸಕರನ್ನೊಳಗೊಂಡ ತಂಡದ ಮೇಲೆ ಶುಕ್ರವಾರ ರಾಜ್ಯದ ಸೆಪಹಿಜಲ ಎಂಬಲ್ಲಿ ದಾಳಿ ನಡೆದಿದೆ.

ತಂಡದಲ್ಲಿದ್ದ 8 ಸದಸ್ಯರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಸಹಾಯಕ ಪೊಲೀಸ್‌ ಮಹಾ ನಿರೀಕ್ಷಕ (ಕಾನೂನು ಮತ್ತು ವ್ಯವಸ್ಥೆ) ಜ್ಯೋತಿಶ್ಚಾನ್ ದಾಸ್ ಚೌಧರಿ ಹೇಳಿದ್ದಾರೆ.

“ಎಡ ಪಕ್ಷಗಳು ಮತ್ತು ಕಾಂಗ್ರೆಸ್‌ಗೆ ಸೇರಿದ ಸಂಸದರು, ಶಾಸಕರು ಮತ್ತು ಸ್ಥಳೀಯ ನಾಯಕರ ನಿಯೋಗವೊಂದು ಇಂದು ಬಿಶಲ್‌ಗರ್‌ನಲ್ಲಿರುವ ನೇಹಲ್ ಚಂದ್ರನಗರ್‌ಗೆ ಪೂರ್ವಯೋಜಿತವಲ್ಲದ ಭೇಟಿ ನೀಡಿದೆ'' ಎಂದು ಚೌಧರಿ ಹೇಳಿದರು. ಅವರ ಭೇಟಿಯ ವೇಳೆ ಘೋಷಣೆಗಳನ್ನು ಕೂಗಲಾಗಿದೆ ಮತ್ತು ಕೆಲವು ದುಷ್ಕರ್ಮಿಗಳು ಅವರ ವಾಹನಗಳ ಮೇಲೆ ದಾಳಿ ನಡೆಸಿದ್ದಾರೆ. ಅವರಿಗೆ ಬೆಂಗಾವಲು ಒದಗಿಸಿದ್ದ ಪೊಲೀಸ್ ತಂಡವು ಕ್ಷಿಪ್ರವಾಗಿ ಪ್ರತಿಕ್ರಿಯಿಸಿ ನಿಯೋಗದ ಸದಸ್ಯರನ್ನು ರಕ್ಷಿಸಿತು” ಎಂದು ಅವರು ಹೇಳಿದರು.

ವಿಧಾನಸಭಾ ಚುನಾವಣಾ ಫಲಿತಾಂಶವು ಮಾರ್ಚ್ 2ರಂದು ಘೋಷಣೆಯಾದ ಬಳಿಕ, ಜಿಲ್ಲೆಯಲ್ಲಿ ಹಿಂಸೆ ಸ್ಫೋಟಗೊಂಡಿತ್ತು. ಬಿಶಲ್‌ಗರ್ ಉಪವಿಭಾಗದ ಗಡಿ ಗ್ರಾಮ ನೇಹಲ್‌ ಚಂದ್ರನಗರದಲ್ಲಿ ಬುಧವಾರ ರಾತ್ರಿ ಕನಿಷ್ಠ 20 ಅಂಗಡಿಗಳನ್ನು ಸುಡಲಾಗಿದೆ.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...