ಕಾರವಾರ : ಜಿಲಾಸ್ಪತ್ರೆಯಲ್ಲಿ ಬಾಣಂತಿ ಸಾವಿಗೆ ಕಾರಣರಾದ ಎಲ್ಲಾ ವೈದ್ಯರು ಮತ್ತು ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕಾರವಾರ ಯುವ ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ ಯುಥ್ ಕಾಂಗ್ರೆಸ್ ಕಾರ್ಯಕರ್ತರು ಬಾಣಂತಿಗೆ ಅನೆಸ್ತೇಶಿಯಾ ನೀಡಲು ಎಡವಟ್ಟು ಮಾಡಿದ್ದರಿಂದಲೇ ಸಾವಾಗಿದೆ. ತಮ್ಮ ತಪ್ಪನ್ನು ಮುಚ್ಚಿ ಹಾಕಲು ಡಾ. ಶಿವಾನಂದ ಕುಡ್ತಲಕರ, ಕ್ರಿಮ್ಸ್ ನಿರ್ದೇಶಕ ಡಾ ಗಜಾನನ ನಾಯಕ, ಡಾ ಮಂಜುನಾಥ ಭಟ್, ಅರುಣ ನಾಯ್ಕ ಮತ್ತು ನರ್ಸ್ ಗಳು ಒಟಿಯಲ್ಲಿ ಕೆಲಸ ಮಾಡುವ ಹರ್ಷಿತ ಜಾಧವ ಅವರಿಗೆ ನೀನೆ ಮಾಡಿದ್ದು ಅಂತಾ ಒಪ್ಪಿಕೋ ಎಂದು ಒತ್ತಡ ಹಾಕಿತ್ತಿರುವುದಕ್ಕೆ ಕಾಂಗ್ರೆಸ್ ಖಂಡಿಸಿದೆ.
ಆದ್ದರಿಂದ ತಪ್ಪೆಸಗಿದ ಸರ್ಜನ್ ಡಾ ಶಿವಾನಂದ ಕುಡ್ತಲಕರ್ ಅವರನ್ನ ಅಮಾನತ್ತುಗೊಳಿಸಬೇಕೆಂದು ಯುವ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಸಾಮಾಜಿಕ ಜಾಲತಾಣದಿಂದ ಒತ್ತಾಯಿಸಿದ್ದಾರೆ.