ಭಟ್ಕಳ ಮದೀನಾ ಕಾಲೋನಿಯಲ್ಲಿ ಮನೆ ಕಳ್ಳತನ ಯತ್ನ

Source: S O News Service | By I.G. Bhatkali | Published on 14th February 2019, 12:15 AM | Coastal News |

ಭಟ್ಕಳ: ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಮನೆಯ ಬಾಗಿಲನ್ನು ಮುರಿದು ಕಳ್ಳತನಕ್ಕೆ ಯತ್ನಿಸಿರುವ ಘಟನೆ ತಾಲೂಕಿನ ಮದೀನಾ ಕಾಲೋನಿಯಲ್ಲಿ ನಡೆದಿದೆ. 

 ಮನೆಯು ಉಸ್ಮಾನ್ ಇಕ್ಕೇರಿಯವರಿಗೆ ಸೇರಿದ್ದಾಗಿದೆ. ಇವರು ಮಂಗಳವಾರ ಸಂಜೆ ಬಂದರ ರಸ್ತೆ 2ನೇ ಕ್ರಾಸ್‍ನಲ್ಲಿರುವ ಮಗಳ ಮನೆಗೆ ತೆರಳಿ, ಬುಧವಾರ ಬೆಳಿಗ್ಗೆ ವಾಪಸ್ಸಾಗುತ್ತಿದ್ದಂತೆಯೇ ಕಳ್ಳತನ ಯತ್ನ ಘಟನೆ ಬೆಳಕಿಗೆ ಬಂದಿದೆ.

ಮನೆಯಲ್ಲಿ ನಗದು ಅಥವಾ ಚಿನ್ನಾಭರಣಗಳನ್ನು ಇಟ್ಟಿಲ್ಲವಾದುದರಿಂದ ಕಳ್ಳರು ನಿರಾಸೆ ಅನುಭವಿಸಿದ್ದಾರೆ.

ಕಳೆದ 1 ವರ್ಷದ ಅವಧಿಯಲ್ಲಿ ಈ ಮನೆಯಲ್ಲಿ ಕಳ್ಳತನ ಯತ್ನ ನಡೆದಿರುವುದು 2ನೇ ಬಾರಿಯಾಗಿದೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಮುಂದುವರೆದಿದೆ.

Read These Next

ಎಸ್.ಎಸ್.ಎಲ್.ಸಿ ಪುನರ್ಬಲನ ತರಗತಿ; ಶಿಕ್ಷಕರ ಹಿತ ಕಾಪಾಡುವಂತೆ ಐಟಾ (AIITA) ದಿಂದ ಸರ್ಕಾರಕ್ಕೆ ಮನವಿ

ಗೌರವಾನ್ವಿತ ಪ್ರಧಾನ ಕಾರ್ಯದರ್ಶಿಯವರಿಗೆ ಸಮಗ್ರ ಮನವಿಯನ್ನು ಸಲ್ಲಿಸಿದ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಬೆಂಗಳೂರು ...