ಭಟ್ಕಳ: ಪೊಲೀಸ್ ಅಧಿಕಾರಿಯೊಬ್ಬರು ಸಾರ್ವಜನಿಕರು ನೀಡಿದ ದೂರನ್ನು ದಾಖಲಿಸಿಕೊಳ್ಳಲು ಮೀನಾಮೇಷ ಎಣಿಸಿದಕ್ಕೆ ಅಮಾನತ್ತುಗೊಳ್ಳುವ ಶಿಕ್ಷೆಯನ್ನು ಅನುಭವಿಸಬೇಕಾಗಿ ಬಂದಿದ್ದು ಇದು ಇತರ ಅಧಿಕರಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ.
ಭಟ್ಕಳದ ಮೊಹಸಿನ್ ಎನ್ನುವವರಿಗೆ ಕೊಲೆ ಬೆದರಿಕೆ ಹಾಗೂ ಹಣದ ಬೇಡಿಕೆಯಿಟ್ಟವರ ವಿರುದ್ಧ ಪ್ರಕರಣದಾಖಲಿಸಿಕೊಳ್ಳುವಂತೆ ನಗರ ಠಾಣೆ ಪಿಎಸ್.ಐ ರೇವತಿಗೆ ದೂರನ್ನು ನೀಡಲು ಹೋದಾಗ ಅವರು ಪ್ರಕರಣ ದಾಖಲಿಸಿಕೊಳ್ಳಲು ಮೀನಾಮೇಷ ಎಣಿಸಿದ್ದರು ಎನ್ನಲಗಿದೆ. ಈ ಪ್ರಕರಣ ಐಜಿ ಮತ್ತು ಡಿಜಿಯವರ ಬಳಿ ಹೋಗಿ ನಂತರ ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕರಿ ವಂಶಿಕೃಷ್ಣರವ ಮೂಲಕ ಭಟ್ಕಳದ ಎ.ಎಸ್.ಪಿಯವರಿಗೆ ಅದೇಶ ನೀಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನವು ಆಗಿತ್ತು.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ರೇವತಿಯವರಿಗೆ ಅಮಾನತ್ತು ಅದೇಶ ನೀಡಿದೆ. ವಿಷಯವನ್ನು ಮೊದಲೆ ಅರಿತುಕೊಂಡ ರೇವತಿಯವರು ಅಮಾನತ್ತು ಆದೇಶ ತೆಗೆದುಕೊಳ್ಳದೆ ತಾನೆ ತಮ್ಮ ಹುದ್ದೆಗೆ ರಾಜಿನಾಮೆ ಸಲ್ಲಿಸುವುದಾಗಿ ರಾಜಿನಾಮೆ ಪತ್ರ ನೀಡಿದ್ದಾಗಿ ತಿಳಿದುಬಂದಿದೆ. ಮಲಾಧಿಕಾರಿಗಳು ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ರಾಜಿನಾಮೆ ಪತ್ರದಲ್ಲಿ ಆರೋಪಿಸಲಾಗಿದೆ. ಈ ಪ್ರಕರಣ ಯಾವ ಮಟ್ಟಕ್ಕೆ ಹೋಗುತ್ತೋ ಕಾದು ನೋಡಬೇಕಾಗಿದೆ.