ಭಟ್ಕಳ ಐತಿಹಾಸಿಕ ಸರಾಬಿ ನದಿ ರಕ್ಷಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ

Source: SOnews | By Staff Correspondent | Published on 2nd March 2024, 9:44 PM | Coastal News |

ಒಂದು ತಿಂಗಳೊಳಗೆ ನದಿಯನ್ನು ಸ್ವಚ್ಚಗೊಳಿಸುವಂತೆ ಮತ್ತು ಒಳಚರಂಡಿ ಘಟಕ ಸ್ಥಳಾಂತರಿಸುವAತೆ ಎಚ್ಚರಿಕೆ ನೀಡಿದ ಸರಾಬಿ ನದಿ ಹೋರಾಟ ಸಮಿತಿ

ಭಟ್ಕಳ: ಭಟ್ಕಳದ ಐತಿಹಾಸಿಕ ಸರಾಬಿ ನದಿ ಪುರಸಭೆಯ ಒಳಚರಂಡಿ ಸಂಸ್ಕರಣ ಘಟಕದಿಂದಾಗಿ ಕಲುಷಿತಗೊಂಡಿದ್ದು ಒಂದು ತಿಂಗಳ ಒಳಗೆ ಒಳಚರಂಡಿ ಘಟಕವನ್ನು ಸ್ಥಳಾಂತರಿಸಬೇಕು ಮತ್ತು ಜೀವನದಿಯಾಗಿರುವ ಸರಾಬಿ ನದಿಯಲ್ಲಿ ತುಂಬಿರುವ ಹೂಳನ್ನು ತೆಗೆದು ಅದನ್ನು ಸ್ವಚ್ಚಗೊಳಿಸುವಂತೆ ಆಗ್ರಹಿಸಿ ರವಿವಾರ ಸರಾಬಿ ನದಿ ಹೋರಾಟ ಸಮಿತಿ ಭಟ್ಕಳ ಪುರಸಭೆ ಮುಖ್ಯಾಧಿಕಾರಿ ಹಾಗೂ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿತು.

ಜಾಮಿಯಾ ಸ್ಟಿçÃಟ್ ಬರ್ನಿಮಟ್ಟಿಯಿಂದ ಮಕ್ಕಳು, ಯುಕವರು, ವೃದ್ಧರು ಸೇರಿದಂತೆ ನೂರಾರು ಪ್ರತಿಭಟನಾಕಾರರು, ಮೊದಲು ಹಳೆ ಬಸ್ ನಿಲ್ದಾಣದ ಬಳಿ ಇರುವ ಪುರಸಭಾ ಕಚೇರಿ ಎದರು ಸರಾಬಿ ನದಿಯ ಗತವೈಭವ ಮರಳಿ ತನ್ನಿ, ಸರಾಬಿ ನದಿಯನ್ನು ರಕ್ಷಿಸಿ ಎಂಬ ಘೋಷಣೆಗಳನ್ನು ಕೂಗುತ್ತ ಪ್ಲೆಕಾರ್ಡ್ ಪ್ರದರ್ಶಿಸಿ ಮುಖ್ಯಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ನಂತರ ಹಳೆ ಬಸ್ ನಿಲ್ದಾಣ ಮಾರ್ಗವಾಗಿ ಶಮ್ಸುದ್ದೀನ್ ವೃತ್ತದಿಂದ ತಾಲೂಕಾ ಆಡಳಿತ ಸೌಧದ ಬಳಿ ಸೇರಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಹಾಗೂ ತಂಝಿಮ್ ಮಾಜಿ ಪ್ರಧಾನ ಕಾರ್ಯದರ್ಶಿ ಡಾ. ಹನೀಫ್ ಶಬಾಬ್ ಗತವೈಭವ ಹೊಂದಿರುವ ಸರಾಬಿ ನದಿ ಪುರಸಭೆಯ ಅವೈಜ್ಞಾನಿಕ ನಿರ್ಧಾರದಿಂದಾಗಿ ಇಂದು ಚರಂಡಿಯಾಗಿ ಪರಿವರ್ತನೆಯಾಗಿದೆ. ವರ್ಷಪೂರ್ತಿ ತುಂಬಿ ಹರಿಯುವ ನದಿ ಇಂದು ಒಣಗಿ ಹೋಗಿದ್ದು ಇದರ ರಕ್ಷಣೆಯ ಹೊಣೆ ಸರ್ಕಾರ ಮತ್ತು ಸಾರ್ವಜನಿಕರದ್ದಾಗಿದೆ ಎಂದರು.

ಭಟ್ಕಳದ ಜೀವನದಿಯಾಗಿರುವ ಸರಾಬಿ ನದಿ ಅವಸಾನದ ಅಂಚಿನಲ್ಲಿದೆ. ಒಂದು ಕಾಲದಲ್ಲಿ ಗತವೈಭವನ್ನು ಮೆರೆದ ನದಿ ಈಗ ಒಳಚರಂಡಿ ನೀರು ಶೇಖರಣಾ ಘಟಕವಾಗಿ ಮಾರ್ಪಟ್ಟಿದ್ದು ಭಾಗದ ಜನರ ಜೀವನಕ್ಕೆ ಕುತ್ತನ್ನು ತಂದೆರಗಿದೆ. ಇದಕ್ಕೆ ಮುಖ್ಯ ಕಾರಣ ಗೌಸಿಯಾ ಸ್ಟಿçÃಟ್ ನಲ್ಲಿ ನಿರ್ಮಾಣವಾಗಿರುವ ಒಳಚರಂಡಿ ಘಟಕ. ಇದರಿಂದಾಗಿ ಸರಾಬಿ ನದಿಗೆ ನಿರಂತರವಾಗಿ ಕಲುಷಿತ ನೀರು ಶೇಖರಣೆಗೊಳ್ಳುತ್ತಿದೆ. ಆದ್ದರಿಂದ ಸರಾಬಿ ನದಿಯನ್ನು ಸ್ವಚ್ಚಗೊಳಿಸುವುದರೊಂದಿಗೆ ನದಿ ಕಲುಷಿತಗೊಳ್ಳಲು ಮೂಲ ಕಾರಣವಾಗಿರುವ ಒಳಚರಂಡಿ ಸಂಸ್ಕರಣ ಘಟಕವನ್ನು ಕೂಡಲೇ ಸ್ಥಳಾಂತರಿಸಿ ಭಾಗದ ಜನರಿಗೆ ನೆಮ್ಮದಿಯ ಬದುಕು ಬದುಕಲು ಅವಕಾಶ ಮಾಡಿಕೊಡಬೇಕೆಂದು ಡಾ.ಶಬಾಬ್ ಆಗ್ರಹಿಸಿದರು.

ತಂಝೀಮ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಮಾತನಾಡಿ, ಸರಾಬಿ ಹೊಳೆ ಈಗ ಸಂಪೂರ್ಣವಾಗಿ ಹೂಳು ತುಂಬಿ ಬತ್ತಿಹೋಗಿದ್ದು ಕಸಕಡ್ಡಿ ಕೆಸರು ತುಂಬಿ ಕಲುಷಿತಗೊಂಡಿದೆ. ಇದರಿಂದಾಗಿ ಮಳೆಗಾಲದಲ್ಲಿ ನೆರೆಯ ಸ್ಥಿತಿ ನಿರ್ಮಾಣವಾಗಿ ಹೊಳೆ ದಂಡೆಯ ನಿವಾಸಿಗಳಲ್ಲಿ ಆತಂಕದ ಸ್ಥಿತಿ ಉಂಟಾಗಿದೆ ಎಂದ ಅವರು, ಸರಾಬಿ ನದಿಯು ಕಲುಷಿತಗೊಂಡು ಭಾಗದ ಗೌಸೀಯ ಸ್ಟಿçÃಟ್, ತಕಿಯಾ ಸ್ಟಿçÃಟ್, ಡಾರಂಟ, ಚೌಥನಿ, ಫಾರೂಖಿ ಸ್ಟಿçÃಟ್, ಜಾಮಿಯಾ ಸ್ಟಿçÃಟ್, ಖಲೀಫಾ ಸ್ಟಿçÃಟ್, ಬೆಳ್ನಿ, ಮುಂಡಳ್ಳಿ, ಆಸರಕೇರಿ ಗಳ ನಿವಾಸಿಗರಲ್ಲಿ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ. ಕಳೆದ ವರ್ಷ ಇಲ್ಲಿ ಸಾಕಷ್ಟು ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು ನಾಲ್ಕೆöÊದು ಸಾವುಗಳು ಕೂಡ ಸಂಭವಿಸಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಸರಾಬಿ ನದಿಯ ಅವಸಾನ ಯಾರಿಂದಲೂ ಸಹಿಸಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ನದಿಯನ್ನು ಪುರ್ನಜೀವನಗೊಳಿಸಬೇಕು. ಇದಕ್ಕಾಗಿ ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಬೇಕು. ಅಲ್ಲದೆ ಶಮ್ಸುದ್ದೀನ್ ವೃತ್ತದ ಬಳಿಯಿಂದ ಸರಾಬಿ ನದಿಗೆ ಒಳಚರಂಡಿ ಪೈಪನ್ನು ಅಳವಡಿಸುತ್ತಿರುವ ಬಗ್ಗೆ ಮಾಹಿತಿ ಇದ್ದು ಇದನ್ನೂ ಸರಾಬಿ ನದಿ ಹೋರಾಟ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಮತ್ತು ಸರಾಬಿ ನದಿಯನ್ನು ಕಲುಷಿತಗೊಳಿಸುವ ಯಾವುದೇ ಇಂತಹ ಕಾರ್ಯವನ್ನು ಹೋರಾಟ ಸಮಿತಿ ಸಹಿಸುವುದಿಲ್ಲ ಎಂದು ಮನವಿ ಪತ್ರದಲ್ಲಿ  ಎಚ್ಚರಿಸಲಾಗಿದೆ.

ಸರಾಬಿ ನದಿ ಹೋರಾಟ ಸಮಿತಿಯ ಸಂಚಾಲಕ ಮುಸ್ತಫಾ ಅಸ್ಕರಿ ಪ್ರತಿಭಟನಾ ಮೆರವಣೆಗೆಯ ನೇತೃತ್ವ ವಹಿಸಿದ್ದರು.

ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿ ಸದಸ್ಯ ಕೈಸರ್ ಮೋಹತೆಶಮ್, ತಾಲೂಕು ಆಡಳಿತಕ್ಕೆ ಎಚ್ಚರಿಕೆ ನೀಡಿ ಸಮಸ್ಯೆ ಬಗೆಹರಿಸಲು ವಿಳಂಬ ಮಾಡಿದರೆ ಮುಂದಿನ ಬಾರಿ ವಿಧಾನ ಸೌಧ ಚಲೋ ಪ್ರತಿಭಟನೆಗೆ ಹೋರಾಟ ಸಮಿತಿ ಹಿಂದೆ ಸರಿಯುವುದಿಲ್ಲ ಎಂದರು.

ಸಮಿತಿಯ ಪದಾಧಿಕಾರಿಗಳಾದ ಮೌಲ್ವಿ ಅಂಜುಮ್ ಗಂಗಾವಳಿ ನದ್ವಿ, ಮೌಲ್ವಿ ರ‍್ಷಾದ್ ನಾಯ್ತೆ ನದ್ವಿ, ಶಮೂನ್ ಹಾಜಿ ಫಖಿಹ್, ಮುಬಾಷರ್ ಹುಸೇನ್ ಹಲ್ಲಾರೆ, ಅಶ್ಫಾಕ್ ಕೆ.ಎಂ, ಮೌಲ್ವಿ ಜವಾದ್ ರುಕ್ನುದ್ದೀನ್, ಜುಬೈರ್ ರ‍್ಮಾರ್, ಅಬ್ದುಲ್ ಸಮಿ ಮೆಡಿಕಲ್, ಫಯಾಜ್ ಮುಲ್ಲಾ, ಇಮ್ತಿಯಾಜ್ ಉದ್ಯಾವರ, ಅಸ್ಲಂ ವಲ್ಕಿ, ಮೊಹಮ್ಮದ್ ಗೌಸ್, ನಜೀರ್ ಖಾಸಿಮ್ಜಿ, ಮೊಹತೆಶಮ್ ಜಾನ್ ಅಬ್ದುಲ್ ರಹಮಾನ್, ನಯೀಮ್ ಮೊಟಿಯಾ, ಜಿಲಾನಿ ಶಾಬಂದ್ರಿ, ಅಡ್ವೊಕೇಟ್ ಇಮ್ರಾನ್ ಲಂಕಾ, ಸಿಟಿ ಮೆಡಿಕಲ್ ಇಕ್ಬಾಲ್, ಮೊಹಮ್ಮದ್ ಹುಸೇನ್ ಮುಅಲಿಮ್, ಸಾಜಿದ್ ಮಿಸ್ಬಾ, ಮೊಹತೆಶಮ್ ರ‍್ನಿ ಹಾಶಿಮ್, ಎಮ್ ಅಬ್ದುಲ್ ಅಮೀರ್, ಎಮ್ ಅಬ್ದುಲ್ ಅಮೀರ್ ಹಮ್ಜಾ, ಸವೂದ್ ಲಂಕಾ, ಹಾರೂನ್ ಸೈಯದ್, ಅಬ್ದುಲ್ ರಶೀದ್ ಐದ್ರುಸಾ, ರ‍್ಷಾದ್ ಸಾದ, ಜಮೀರ್, ರಾಯಿಸ್ ರುಕ್ನುದ್ದೀನ್, ಅಬ್ದುಲ್ ಬಾಸಿತ್ ಗೊಲ್ಟೆ ಸೇರಿದಂತೆ ಹಲವರು ಭಾಗವಹಿಸಿದ್ದರು.

Read These Next

ಎಸ್.ಎಸ್.ಎಲ್.ಸಿ ಪುನರ್ಬಲನ ತರಗತಿ; ಶಿಕ್ಷಕರ ಹಿತ ಕಾಪಾಡುವಂತೆ ಐಟಾ (AIITA) ದಿಂದ ಸರ್ಕಾರಕ್ಕೆ ಮನವಿ

ಗೌರವಾನ್ವಿತ ಪ್ರಧಾನ ಕಾರ್ಯದರ್ಶಿಯವರಿಗೆ ಸಮಗ್ರ ಮನವಿಯನ್ನು ಸಲ್ಲಿಸಿದ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಬೆಂಗಳೂರು ...