ಭಟ್ಕಳ: ಇಲ್ಲಿನ ತಾಲೂಕಾ ಆಸ್ಪತ್ರೆಯಲ್ಲಿ ಫೆ.23ರಂದು ರವಿವಾರ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದ್ದು ಉಡುಪಿಯ ಆದರ್ಶ ಆಸ್ಪತ್ರೆಯ ತಜ್ಞ ವೈದ್ಯರುಗಳು ಭಾಗವಹಿಸಲಿದ್ದಾರೆ.
ಭಟ್ಕಳ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘ, ಉ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ತಾಲೂಕಾ ಆಸ್ಪತ್ರೆ, ರಂಜನ್ ಇಂಡೇನ್ ಎಜೆನ್ಸಿ, ಸಾಲಗದ್ದೆ ಸ್ಪೋಟ್ರ್ಸ ಕ್ಲಬ್, ಕಟ್ಟೆವೀರ ಯುವಶಕ್ತಿ ಸಂಘ ಇವರ ಆಶ್ರಯದಲ್ಲಿ ಹಮ್ಮಿಕೊಂಡಿರುವ ಶಿಬಿರವನ್ನು ಶಾಸಕ ಸುನಿಲ್ ನಾಯ್ಕ ಉದ್ಘಾಟಿಸುವರು.
ಆದರ್ಶ ಆಸ್ಪತ್ರೆ ಉಡುಪಿಯ ಡಾ. ಚಂದ್ರಶೇಖರ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಉಪ ಪೊಲೀಸ್ ಆಯುಕ್ತ ಗೌತಮ್ ಅವರು ಕಾರ್ಯನಿತರ ಪತ್ರಕರ್ತರಿಗೆ ಆರೋಗ್ಯ ಕಾರ್ಡ ವಿತರಣೆ ಮಾಡುವರು. ಮುಖ್ಯ ಅತಿಥಿಗಳಾಗಿ ಪ್ರೊ. ಡಾ. ಎ. ರಾಜಾ, ಡಾ. ಸವಿತಾ ಕಾಮತ್, ಎಸ್.ಎಂ.ಪರ್ವೇಜ್, ಶಿವಾನಿ ಶಾಂತಾರಾಮ, ರಾಧಾಕೃಷ್ಣ ಭಟ್ಟ, ಭಾಸ್ಕರ ನಾಯ್ಕ ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.