ಭಟ್ಕಳ: ಸ್ವಾತಂತ್ರ್ಯೋತ್ಸವದ ಅಂಗವಾಗಿ ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಬೀನಾವೈದ್ಯ ಶಾಲಾ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ದೇಶಭಕ್ತಿ ಗೀತೆ ಸ್ಪರ್ಧೆಯನ್ನು ಆಯೋಜಿಸಲಾಯಿತು. ಬೀನಾ ವೈದ್ಯ ಇಂಟರನ್ಯಾಶನಲ್ ಪಬ್ಲಿಕ್ ಶಾಲೆಯ ಸುಮಾರು ೪೮ ವಿಧ್ಯಾರ್ಥಿಗಳು ಸ್ಪರ್ದೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರವನ್ನು ಕಸಾಪ ಗೌರವ ಕಾರ್ಯದರ್ಶಿ ಎಮ್.ಪಿ.ಬಂಢಾರಿ ಸಂಘಟಿಸಿ ನಿರ್ವಹಿಸಿದರು. ಸ್ಪರ್ದೆಯಲ್ಲಿ ವಿಜೇತರಾದ ವಿಧ್ಯಾರ್ಥಿಗಳಿಗೆ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಪುಷ್ಪಲತಾ ಎಮ್.ಎಸ್. ಪ್ರಮಾಣ ಪತ್ರ ಹಾಗೂ ಪುಸ್ತಕವನ್ನು ಬಹುಮಾನವಾಗಿ ವಿತರಿಸಿದರು. ನಿರ್ಣಾಯಕರಾಗಿ ಆರ್.ಎನ್.ಎಸ್. ಪ.ಪೂ. ಕಾಲೇಜಿನ ಉಪನ್ಯಾಸಕ ಎಮ್.ಎಸ್.ಹೆಗಡೆ, ಕಸಾಪ ಗೌರವ ಕಾರ್ಯದರ್ಶಿ ಎಮ್.ಪಿ.ಬಂಢಾರಿ ನಿರ್ವಹಿಸಿದರು. ಬಹುಮಾನ ವಿಜೇತರಿಗೆ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಅಭಿನಂದಿಸಿದ್ದಾರೆ.
ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತು ಹಾಗೂ ಸರಕಾರಿ ಪ್ರೌಢಶಾಲೆ ಬೆಳಕೆ ಇದರ ಸಹಯೋಗದಲ್ಲಿ ಸ್ವತಂತ್ರ್ಯೋತ್ಸವದ ಅಂಗವಾಗಿ ದೇಶಭಕ್ತಿಗೀತೆಞ ಸಮೂಹ ಗಾಯನ ಹಾಗೂ ಭಾಷಣ ಸ್ಪರ್ದೆಯನ್ನು ಏರ್ಪಡಿಸಲಾಗಿತ್ತು.ಭಾಷಣ ಸ್ಪರ್ಧೆಯಲ್ಲಿ ಪ್ರಮೋದ ಪದ್ಮಯ್ಯ ನಾಯ್ಕ ಪ್ರಥಮ,ತಿಲಕ ಭಾಸ್ಕರ ನಾಯ್ಕ ದ್ವಿತೀಯ ತಾರಾ ಅಣ್ಣಪ್ಪ ನಾಯ್ಕ ಪಡೆದುಕೊಂಡರೆ, ಸಮೂಹ ಗಾಯನ ಸ್ಪರ್ಧೆಯಲ್ಲಿ ವನಜಾ ಸಂಗಡಿಗರು ಪ್ರಥಮ,ನಯನಾ ಸಮಗಡಿಗರು ದ್ವಿತೀಞ, ಸುಚಿತ್ರ ಸಂಗಡಿಗರು ತ್ರತಿಯ ಸ್ಥಾನ ಪಡೆದರು. ವಿಜೇತರಿಗೆ ಶಾಲಾ ಮುಖ್ಯಾಧ್ಯಾಪಕ ಚಂದ್ರಕಾಂತ ಗಾಮವಕರ್ ಪ್ರಮಾಣ ಪತ್ರ ಮತ್ತು ಬಹುಮಾನ ವಿತರಿಸಿದರು.ಸ್ಪರ್ಧೆಯನ್ನು ಕಸಾಪ ಸಮಘಟನಾ ಕಾರ್ಯರ್ಶಿ ಪ್ರಕಾಶ ಶಿರಾಲಿ ಸಂಘಟಿಸಿದ್ದರು. ಬಹುಮಾನ ವಿಜೆತರಿಗೆ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಅಭಿನಂದಿಸಿದ್ದಾರೆ.