ಭಟ್ಕಳ: ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ೧೪ ಬಡ ರೋಗಿಗಳು ಹಾಗೂ ಅಂಗವಿಕಲರಿಗೆ ಭಟ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕ ಮಾಂಕಾಳ್ ವೈದ್ಯ ಮಂಗಳವಾರ ಒಟ್ಟು ರೂ. ೩೯೭೩೫೫ಗಳ ಧನಸಹಾಯ ವಿತರಣೆ ಮಾಡಿದರು.
ಅಲ್ಲದೆ ತಾಲೂಕಿನ ೯ ಅಂಗವಿಕಲರಿಗೆ ಶಾಸಕರ ಪರಿಹಾರ ನಿಧಿಯಿಂದ ತ್ರೀಚಕ್ರ ವಾಹನಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷ ಈಶ್ವರ್ ಬಿಳಿಯಾ ನಾಯ್ಕ, ಉಪಾಧ್ಯಕ್ಷೆ ರಾಧಾ ಮೊಗೇರ್, ವಿಷ್ಣುದೇವಾಡಿಗ, ಜಿ.ಪಂ.ಸದಸ್ಯೆ ಸಿಂಧೂ ಭಾಸ್ಕರ್ ನಾಯ್ಕ, ತಾ.ಪಂ ಸದಸ್ಯ ಮಹಾಬಲೇಶ್ವರ ನಾಯ್ಕ, ತಹಸಿಲ್ದಾರ್ ವಿ.ಎನ್.ಬಾಡ್ಕರ್, ತಾ.ಪಂ. ಅಧಿಕಾರಿ, ಸಿ.ಟಿ.ನಾಯ್ಕ, ಮಂಜುನಾಥ್ ಬೆಳ್ಕೆ, ನಾರಾಯಣ ಬಿ.ನಾಯ್ಕ, ಮುಂತಾದವರು ಉಪಸ್ಥಿತರಿದ್ದರು.