ಜೇನು ಹುಳುಗಳು ಮೂವರ ಮೇಲೆ ಹಠಾತ್ ದಾಳಿ

Source: so news | By MV Bhatkal | Published on 18th November 2022, 11:59 PM | Coastal News | Don't Miss |

ಭಟ್ಕಳ:ಜೇನು ಗೂಡು ಕಟ್ಟಿದ್ದ ಮರದ ಕೊಂಬೆ ಆಕಸ್ಮಿಕವಾಗಿ ತುಂಡಾಗಿ ಬಿದ್ದ ಪರಿಣಾಮ ಮನೆಯಲ್ಲಿದ್ದ ಮೂವರ ಮೇಲೆ ಜೇನು ಹುಳುಗಳು ದಾಳಿ ನಡೆಸಿರುವ ಘಟನೆ ಶುಕ್ರವಾರ ಮಧ್ಯಾಹ್ನ ತೆರ್ನಮಕ್ಕಿ ಸಬಾತಿಯಲ್ಲಿ ನಡೆದಿದೆ. 

ಜೇನು ಹುಳುಗಳಿಂದ ದಾಳಿಗೊಳಗಾದವರನ್ನು ವೆಂಕಟಪ್ಪ ಸುಕ್ರ ನಾಯ್ಕ, ಮಂಜಪ್ಪ ಸುಕ್ರ ನಾಯ್ಕ ಹಾಗೂ ಮನೆಯಲ್ಲಿದ್ದ ಓರ್ವ ಮಹಿಳೆ ಎಂದು ತಿಳಿದು ಬಂದಿದೆ. ಕಳೆದ ಹಲವಾರು ದಿನಗಳಿಂದ ಮನೆಯ ಸಮೀಪವಿರುವ ಮರವೊಂದರಲ್ಲಿ ಜೇನು ಗೂಡು ಕಟ್ಟಿಕೊಂಡಿತ್ತು. ಆದರೆ ಇಂದು ಆಕಸ್ಮಿಕವಾಗಿ  ಜೇನು ಗೂಡು ಕಟ್ಟಿದ ಮರದ ಕೊಂಬೆ ಕಟ್ಟಾಗಿ ಬಿದ್ದ ಪರಿಣಾಮ ಮನೆಯಲ್ಲಿದ್ದ ಮೂವರ ಮೇಲೆ ಜೇನು ಹುಳುಗಳು ದಾಳಿ ಮಾಡಿದೆ. ತಕ್ಷಣ ಅವರನ್ನು ಭಟ್ಕಳ  ಸರ್ಕಾರಿ ಆಸ್ಪತ್ರೆಗೆ ಕರೆತಂದು  ಚಿಕಿತ್ಸೆ ನೀಡಲಾಗಿದೆ

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...